Best Viewed in Mozilla Firefox, Google Chrome

FIS

21
Jan

హైబ్రిడ్ వరి వంగడములు- యాజమాన్యపద్దతులు- Hybrid Rice Cultivation

 

File Courtesy: 
Dr. A.S. Hari Prasad, Dr. P. Senguttuvel, Dr. P. Revathi, Dr. Kemparaju, Dr. G.S.V. Prasad & Dr. B.C. Viraktamath
27
Dec

నవనవలాడే నారుమడి కోసం.../ For a Healthy Nursery....

జగిత్యాల అగ్రికల్చర్, న్యూస్‌లైన్: రాష్ట్రంలోని పలు ప్రాంతాల్లో బోర్లు, బావులు, ఇతర నీటి వనరుల కింద రైతులు వరి నారుమడులు పోసుకున్నారు. నారుమడి దశలోనే తగిన యాజ మాన్య, సస్యరక్షణ చర్యలు చేపట్టినట్లయితే మొ క్కలు ఆరోగ్యవంతంగా పెరుగుతాయి. ప్రధాన పొలంలో పైరు ఎటువంటి చీడపీడలకు లోనవకుండా ఎదిగి, నాణ్యమైన దిగుబడులు అంది స్తుంది. ఈ నేపథ్యంలో వరి నారుమడిలో చేపట్టాల్సిన చర్యలపై కరీంనగర్ జిల్లా పొలాస ప్రాంతీయ వ్యవసాయ పరిశోధనా స్థానం శాస్త్రవేత్త డాక్టర్ చంద్రమోహన్ (వరి) అందిస్తున్న సూచనలు...

నారు పోసిన 10-15 రోజుల తర్వాత 5 సెంట్ల నారుమడిలో (ఇది ఎకరం విస్తీర్ణంలో నాటేందుకు సరిపోతుంది) 2.2 కిలోల యూరి యాను పైపాటుగా చల్లుకోవాలి. మొక్కలకు రెండు మూడు ఆకులు వచ్చే వరకూ ఆరుతడులు ఇవ్వాలి. ఆ తర్వాత మడిలో పలచగా నీరు పెట్టాలి. చలి ప్రభావం ఎక్కువగా ఉన్నట్లయితే రాత్రి వేళల్లో నారుమడిపై పాలిథిన్ షీటు కప్పి, ఉదయాన్నే తీసేయాలి. రబీ వరిలో జింక్ లోప లక్షణాలు ఎక్కువగా కన్పిస్తుంటాయి. ఈ లోపాన్ని నివారించేందుకు లీటరు నీటికి 2 గ్రాముల చొప్పున జింక్ సల్ఫేట్ కలిపి నారుమడిలో పిచికారీ చేసుకోవాలి.

 

కలుపు నివారణ ఇలా...
విత్తనాలు చల్లిన 3-5 రోజులకు 10 లీటర్ల నీటికి 75 మిల్లీలీటర్ల బెంధియోకార్బ్ లేదా 80 మిల్లీలీటర్ల బుటాక్లోర్ కలిపి 5 సెంట్ల నారుమడిలో పిచికారీ చేసినట్లయితే ఊద వంటి కలుపు మొక్కల్ని నిర్మూలించవచ్చు. కలుపు మందు పిచికారీ చేసేటప్పుడు నారుమడిలో నీటిని తీసేయాలి. కలుపు మొక్కలు ఎక్కువగా ఉన్నట్లయితే విత్తనాలు చల్లిన 15వ రోజున 10 లీటర్ల నీటిలో 20 మిల్లీలీటర్ల చొప్పున సైహలోఫాప్ బ్యూటైల్ కలిపి పిచికారీ చేయాలి.

చీడపీడల నివారణ కోసం...
విత్తనాలు చల్లిన 12-14 రోజుల తర్వాత నారుమడిలో కాండం తొలుచు పురుగు, ఉల్లికోడు, హిస్పా, తామర పురుగులు కన్పించినట్లయితే అవసరాన్ని బట్టి లీటరు నీటికి 1.6 మిల్లీలీటర్ల మోనోక్రొటోఫాస్ లేదా 2.5 మిల్లీలీటర్ల క్లోరిపైరిఫాస్ లేదా 2 మిల్లీలీటర్ల క్వినాల్‌ఫాస్ చొప్పున కలిపి పిచికారీ చేయాలి. నారు తీయడానికి వారం రోజుల ముందు 5 సెంట్ల నారుమడిలో 800 గ్రాముల కార్బోఫ్యూరాన్ 3జీ గుళికలు లేదా 250 గ్రాముల ఫోరేట్ 10జీ గుళికలు వేసుకుంటే ప్రధాన పొలంలో కాండం తొలుచు పురుగు, ఉల్లికోడును సమర్ధవంతంగా అరికట్టవచ్చు. అలాగే నారుమడిని పొడ తెగులు, కాండం కుళ్లు తెగులు సోకకుండా ఉండాలంటే పరిసరాల్లో కలుపు మొక్కలు లేకుండా చూసుకోవాలి. నారుమడిలో తెగుళ్లు కన్పిస్తే అవసరాన్ని బట్టి లీటరు నీటికి 2 మిల్లీలీటర్ల హెక్సాకొనజోల్ 5 ఈసీ లేదా వాలిడామైసిన్ చొప్పున కలిపి పిచికారీ చేయాలి.

నారు తీసేటప్పుడు...
నారు తీసేటప్పుడు మొక్కలు లేత ఆకుపచ్చ రంగులో ఉండాలి. దీనివల్ల మూన త్వరగా తిరుగుతుంది. 4-6 ఆకులు వచ్చిన తర్వాతే నారు పీకాలి. విత్తనాలు చల్లిన 25-30 రోజుల మధ్య నారు తీసి ప్రధాన పొలంలో నాట్లు వేయాలి. నారు మొక్కల వయసు ఎట్టి పరిస్థితుల్లోనూ 35 రోజులు దాటకూడదు. నారు తీసేటప్పుడు మొక్కల వేర్లు తెగకుండా చూడాలి.

నాట్లు వేసేటప్పుడు...
నాట్లు వేసేటప్పుడు రైతులు తగిన జాగ్రత్తలు తీసుకోవాలి. ముదురు నారు నాటితే దిగుబడి తగ్గుతుంది. నారును పైపైన నాటితే ఎక్కువ పిలకలు తొడిగే అవకాశం ఉంది. నాట్లు వేసేట ప్పుడు భూసారాన్ని అనుసరించి అవసరమైన పోషకాలు అందించాలి. నాట్లు వేసేటప్పుడు పొలంలో నీరు పలచగా ఉండాలి. మొక్కలు నాటిన తర్వాత ప్రతి 2 మీటర్లకూ 20 సెంటీమీటర్ల కాలిబాట తీయాలి. దీనివల్ల పైరుకు గాలి, వెలుతురు బాగా అందుతాయి. చీడపీడల తాకి డి కొంత వరకూ తగ్గుతుంది. ఎరువులు వేయ డం, పురుగు-కలుపు మందులు పిచికారీ చేయ డం సులభమవుతుంది. పైరు పరిస్థితిని ఎప్పటికప్పుడు గమనించి తగిన చర్యలు తీసుకోవడానికి కూడా కాలిబాటలు ఉపయోగపడతాయి.

ఇవి గుర్తుంచుకోండి
వరుసలు, మొక్కల మధ్య 15 సెంటీమీటర్ల చొప్పున దూరాన్ని పాటిస్తూ చదరపు మీటరుకు 44 మొక్కలు ఉండేలా వరి నాట్లు వేసుకోవాలి. చివరి దుక్కిలో విధిగా ఎకరానికి 20 కిలోల చొప్పున జింక్ సల్ఫేట్ వేయాలి. సిఫార్సు చేసిన నత్రజనిని 3 సమాన భాగాలుగా చేసి నాట్లకు ముందు దమ్ములోనూ, పైరు దుబ్బు చేసే దశలోనూ, అంకురం దశలోనూ వేసుకోవాలి. నత్రజని ఎరువును బురద పదునులో మాత్రమే వెదజల్లి, 36-48 గంటల తర్వాత నీరు పెట్టాలి. 50 కిలోల యూరియాకు 10 కిలోల చొప్పున వేపపిండిని కలిపి వేస్తే నత్రజని వినియోగ సామర్ధ్యం పెరుగుతుంది.

సిఫార్సు చేసిన భాస్వరం ఎరువును పూర్తిగా దమ్ములోనే వేయాలి. రేగడి నేల అయితే పొటాష్ ఎరువును కూడా పూర్తిగా ఆఖరి దమ్ములోనే వేయాలి. ఒకవేళ చల్కా (తేలిక) నేల అయితే ఆఖరి దమ్ములో సగం, అంకురం ఏర్పడే సమయంలో మిగిలిన సగం పొటాష్‌ను వేసుకోవాలి. కాంప్లెక్స్ ఎరువుల్ని పైరు దుబ్బు చేసే సమయంలో, అంకురం ఏర్పడే సమయంలో పైపాటుగా వేయకూడదు. దమ్ములోనే వేయడం మంచిది. జింక్ సల్ఫేట్‌ను భాస్వరం ఎరువుతో కలిపి వేయకూడదు. ఈ రెండు ఎరువులు వేయడానికి మధ్య కనీసం 3 రోజుల వ్యవధి ఉండాలి. అలాగే పైరుపై జింక్ సల్ఫేట్ ద్రావణాన్ని పిచికారీ చేసేటప్పుడు దానిలో పురుగు/తెగుళ్ల మందు కలపకూడదు.

File Courtesy: 
http://www.sakshi.com/main/WeeklyDetails.aspx?Newsid=54868&Categoryid=7&subcatid=7
Image Courtesy: 
http://www.sakshi.com/main/WeeklyDetails.aspx?Newsid=54868&Categoryid=7&subcatid=7
13
Dec

రబీ వరి సాగులో మెలకువలు/ Effective management practices in Rabi Paddy

COURTESY :AGRICLINIC MONTHLY MAGAZINE -December 2012

12
Dec

ಸುಧಾರಿತ ಭತ್ತದ ತಳಿಗಳು ಕರ್ನಾಟಕ (ದಕ್ಷಿಣ ಮೈದಾನ ಪ್ರದೇಶ)

      ಸುಧಾರಿತ ಭತ್ತದ ತಳಿಗಳು

   ಕರ್ನಾಟಕ (ದಕ್ಷಿಣ ಮೈದಾನ ಪ್ರದೇಶ)
ಭತ್ತದ ತಳಿ ಅಬಿವೃದ್ಧಿ ವಿಭಾಗ

ವಲಯ ಕೃಷಿ ಸಂಶೋಧನಾ ಕೇಂದ್ರ

ವಿ.ಸಿ.ಫಾರಂ, ಮಂಡ್ಯ-571405

 

                   ಭತ್ತವು ಕರ್ನಾಟಕ ರಾಜ್ಯದ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ಒಂದು ಪ್ರಮುಖ ಆಹಾರ ಬೆಳೆಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಬೆಳೆಯನ್ನು ಕೆರೆ, ಬಾವಿ ಹಾಗೂ ಮಳೆ ಆಶ್ರಯಗಳಲ್ಲೂ ಕಾಣಬಹುದುರಾಜ್ಯದ ಸುಮಾರು 13.28 ಲಕ್ಷ ಹೆಕ್ಟೇರುಗಳಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಬೆಳೆಯನ್ನು ಬೆಳೆಯಲಾಗುತ್ತಿದ್ದು ವಾರ್ಷಿಕ ಸುಮಾರು 38.56 ಲಕ್ಷ ಟನ್ಗಳಷ್ಟು ಭತ್ತವನ್ನು ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದ ದಕ್ಷಿಣ ಜಿಲ್ಲೆಗಳ ಮೈದಾನ ಪ್ರದೇಶಕ್ಕೆ ಬಿತ್ತನೆ ಕಾಲ, ನೀರಿನ ಲಭ್ಯತೆ, ಕೀಟ ಹಾಗೂ ರೋಗದ ತೀವ್ರತೆ ಮತ್ತು ಮಣ್ಣಿನ ಗುಣಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕ ಇಳುವರಿ ನೀಡುವ ಅನೇಕ ತಳಿಗಳು ಹಾಗೂ ಹೈಬ್ರಿಡ್ಗಳನ್ನು ಅಭಿವೃದ್ಧಿಪಡಿಸಲಾಗಿದೆಆದುದರಿಂದ ರೈತರು ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ತಮ್ಮ ಜಮೀನಿಗೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿಕೊಂಡು ಬೆಳೆಯುವುದರಿಂದ ಹೆಚ್ಚಿನ ಲಾಭ ಪಡೆಯಬಹುದು. ರಾಜ್ಯದ ದಕ್ಷಿಣ ಮೈದಾನ ಪ್ರದೇಶದ ವಿವಿಧ ಭಾಗಗಳಿಗೆ ಶಿಫಾರಸ್ಸು ಮಾಡಲಾಗಿರುವ ಅಧಿಕ ಇಳುವರಿ ನೀಡುವ ಪ್ರಮುಖ ಸುಧಾರಿತ ಭತ್ತದ ತಳಿಗಳ ಮುಖ್ಯವಾದ ಗುಣಲಕ್ಷಣಗಳನ್ನು ಇಲ್ಲಿ ವಿವರಿಸಿಕೊಡಲಾಗಿದೆ.

 

 

ದೀರ್ಘಾವಧಿ ತಳಿಗಳು

              ಬಿ.ಆರ್-2655: ತಳಿಯನ್ನು ಬಾಂಗ್ಲಾದೇಶದಿಂದ ಆಮದು ಮಾಡಿಕೊಂಡ ಬಿ.ಆರ್.2655-9-1-1-2 ಎಂಬ ತಳಿಯೊಂದರಿಂದ ಪುನರಾಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗಿದೆ.  140 ರಿಂದ 145 ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುವ ತಳಿಯ ಸಸಿಮಡಿ ತಯಾರು ಮಾಡಲು ಜೂನ್ ತಿಂಗಳ ಕೊನೆಯ ವಾರ ಅತ್ಯಂತ ಸೂಕ್ತ ಕಾಲಜಯ ತಳಿಗಿಂತ ಎತ್ತರವಾಗಿ ಬೆಳೆಯುವ ತಳಿಯು ಗೊನೆ ಬಾಗಿದ ನಂತರವೂ ಕೆಳಗೆ ಬೀಳುವುದಿಲ್ಲ (oಟಿ-ogiಟಿg). ಭತ್ತವು ಮಧ್ಯಮ ವರ್ಗಕ್ಕೆ ಸೇರಿದ್ದು ಗಿರಣಿಯಲ್ಲಿ ಹೆಚ್ಚಿನ ಅಕ್ಕಿಯ ಇಳುವರಿ ನೀಡುತ್ತದೆ ತಳಿಯು ಬೆಂಕಿ ರೋಗಕ್ಕೆ ಸಹಿಷ್ಣುತಾ ಶಕ್ತಿ ಹೊಂದಿದೆಆದುದರಿಂದ ಪ್ರತಿ ವರ್ಷವೂ ಬೆಂಕಿ ರೋಗ ಕಂಡುಬರುವ ಪ್ರದೇಶಗಳಿಗೆ ಇದು ಅತ್ಯಂತ ಸೂಕ್ತವಾದುದುಉತ್ತಮ ಬೆಳೆಯೊಂದರಿಂದ ಎಕರೆಗೆ 30 ರಿಂದ 35 ಕ್ವಿಂಟಾಲ್ ಇಳುವರಿ ಪಡೆಯಬಹುದು.

 

              ..ಟಿ-8116: ಸೋನಾ ಮತ್ತು ಆಂಡ್ರೋಸಾಲಿ ತಳಿಗಳ ಸಂಕರಣದಿಂದ ಅಭಿವೃದ್ಧಿ ಪಡಿಸಲಾಗಿರುವ ತಳಿಯು ಕಂದು ಜಿಗಿ ಹುಳುವಿಗೆ (ಬಿ.ಪಿ.ಹೆಚ್) ನಿರೋಧಕ ಶಕ್ತಿಯನ್ನು ಹೊಂದಿದೆಆದುದರಿಂದ ಕಂದು ಜಿಗಿ ಹುಳುವಿನ ಬಾಧೆ ಕಂಡುಬರುವ ಪ್ರದೇಶಗಳಿಗೆ ತಳಿಯು ಅತ್ಯಂತ ಸೂಕ್ತವಾದುದುಜಯ ಭತ್ತದಂತೆ ದಪ್ಪಕಾಳನ್ನು ಹೊಂದಿರುವ ಇದು ಜಯಕ್ಕಿಂತ ಸ್ವಲ್ಪ ಎತ್ತರ ಬೆಳೆಯುತ್ತದೆ.  140 ದಿನಗಳಲ್ಲಿ ಕಟಾವಿಗೆ ಬರುವ ತಳಿಯ ಬಿತ್ತನೆಗೆ ಜೂನ್ ತಿಂಗಳು ಅತ್ಯಂತ ಸೂಕ್ತವಾದುದುಎಕರೆಗೆ 30 ರಿಂದ 35 ಕ್ವಿಂಟಾಲ್ ಕಾಳಿನ ಇಳುವರಿ ನೀಡುವ ಇದು ಹೆಚ್ಚಿನ ಹುಲ್ಲನ್ನೂ ಕೊಡುತ್ತದೆ.

 

               ಜಯ: ತಳಿಯನ್ನು ಟಿ.ಎನ್-1 ಮತ್ತು ಟಿ-141 ತಳಿಗಳ ಸಂಕರಣದಿಂದ ಉತ್ಪಾದಿಸಲಾಗಿದೆ. 140 ರಿಂದ 145 ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುವ ತಳಿಯನ್ನು ಜೂನ್ ತಿಂಗಳ ಕೊನೆಯ ವಾರದಲ್ಲಿ ಬಿತ್ತನೆ ಮಾಡಿ ಜುಲೈ ತಿಂಗಳ ಮೂರನೇ ವಾರದೊಳಗೆ ನಾಟಿ ಮಾಡುವುದು ಸೂಕ್ತಬಿತ್ತನೆ ಹಾಗೂ ನಾಟಿಯ ಮುಂದೂಡುವಿಕೆ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆಮುಂಗಾರು ಹಂಗಾಮಿನಲ್ಲಿ ಬೆಂಕಿರೋಗ ಹಾಗೂ ಕಂದು ಜಿಗಿ ಹುಳುವಿನ ಭಾಧೆಗೆ ತುತ್ತಾಗುವ ತಳಿಯು ಬೇಸಿಗೆ ಹಂಗಾಮಿಗೆ ಹೆಚ್ಚು ಸೂಕ್ತವಾದುದು ತಳಿಯ ಪೈರು ಗಿಡ್ಡವಾಗಿದ್ದು ಕಾಳು ದಪ್ಪವಾಗಿರುತ್ತದೆಎಕರೆಗೆ 30 ರಿಂದ 32 ಕ್ವಿಂಟಾಲ್ ಇಳುವರಿ ಸಾಮಥ್ರ್ಯ ಹೊಂದಿರುವ ತಳಿಯು ಎಲ್ಲಾ ಪ್ರದೇಶಗಳಿಗೂ ಹೊಂದಿಕೊಂಡು ಬೆಳೆಯುವ ವಿಶೇಷ ಗುಣ ಹೊಂದಿದೆ.

 

ಅಲ್ಪಾವಧಿ ತಳಿಗಳು

           ಎಂ.ಟಿ.ಯು-1010: ಬಿತ್ತನೆಯಿಂದ ಕೊಯ್ಲಿಗೆ 120 ರಿಂದ 125 ದಿನಗಳನ್ನು ತೆಗೆದುಕೊಳ್ಳುವ ಈ ತಳಿಯ ಕಾಳುಗಳು ಸಣ್ಣದಾಗಿ ಉದ್ದವಾಗಿರುತ್ತದೆ.  ಸುಮಾರು ಎರಡರಿಂದ ಎರಡುವರೆ ಅಡಿ ಎತ್ತರ ಬೆಳೆಯುವ ಇದು ಕಡಿಮೆ ನೀರಿನ ಲಭ್ಯತೆಯಲ್ಲಿ ಬೆಳೆಯಲು ಹೆಚ್ಚು ಅನುಕೂಲ.  ಭತ್ತವು ಹೆಚ್ಚು ಮಾಗಿದರೆ ಕಾಳು ಉದುರುತ್ತದೆ. ಆದ್ದರಿಂದ ಪ್ರತಿ ಗೊನೆಯ ತಳಭಾಗದ ಕಾಳು ಇನ್ನೂ ಸ್ವಲ್ಪ ಹಸಿರಾಗಿರುವಾಗಲೆ ಕಟಾವು ಮಾಡಬೇಕು.  ಉತ್ತಮ ಬೆಳೆಯೊಂದರಿಂದ ಎಕರೆಗೆ 24 ರಿಂದ 26 ಕ್ವಿಂಟಾಲ್ ಇಳುವರಿ ಪಡೆಯಬಹುದು.

 

              ಜ್ಯೋತಿ: ಈ ತಳಿಯು 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವ ಒಂದು ಅಲ್ಪಾವಧಿ ತಳಿ.  ಭತ್ತವು ದಪ್ಪವಾಗಿ ಉದ್ದವಾಗಿದ್ದು ಅಕ್ಕಿಯು ಕೆಂಪಗಿರುತ್ತದೆ.  ಮುಂಗಾರಿನಲ್ಲಿ ಜುಲೈ ಕೊನೆಯವರೆಗೂ ಉಪಯೋಗಿಸಬಹುದು.  ಈ ತಳಿಯು ಊದುಭತ್ತ ರೋಗ, ದುಂಡಾಣು ರೋಗ ಹಾಗೂ ಎಲೆ ಕವಚ ಕೊಳೆ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತದೆ.  ಆದುದರಿಂದ ರೈತರು ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅತೀ ಅವಶ್ಯಕ.  ಉತ್ತಮ ಬೆಳೆಯೊಂದರಿಂದ ಎಕರೆಗೆ 18 ರಿಂದ 20 ಕ್ವಿಂಟಾಲ್ ಇಳುವರಿ ಪಡೆಯಬಹುದು.

 

                 ತೆಲ್ಲಹಂಸ: ಈ ತಳಿಯು ಸಹ 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವ ಒಂದು ಅಲ್ಪಾವಧಿ ತಳಿಯಾಗಿದ್ದು ಅಕ್ಕಿಯು ಬೆಳ್ಳಗಿರುತ್ತದೆ.  ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ಸೂಕ್ತವಾದ ಈ ತಳಿಯ ಭತ್ತವು ಮಧ್ಯಮ ಸಣ್ಣದಾಗಿದ್ದು ಊಟಕ್ಕೆ ಹೆಚ್ಚು ರುಚಿಯಾಗಿರುತ್ತದೆ.  ಎಕರೆಗೆ 18 ರಿಂದ 20 ಕ್ವಿಂಟಾಲ್‍ಗಳವರೆಗೂ ಇಳುವರಿ ನೀಡುವ ಈ ತಳಿಯನ್ನು ಜುಲೈ ಕೊನೆಯವರೆಗೂ ಬಿತ್ತನೆ ಮಾಡಬಹುದು.

 

                   ರಾಶಿ: ರಾಷ್ಟ್ರಮಟ್ಟದಲ್ಲಿ ಐ.ಇ.ಟಿ-1444 ಮತ್ತು ಪ್ರಾದೇಶಿಕವಾಗಿ ಭರಣಿ ಎಂಬ ಹೆಸರುಗಳಿಂದ ಪ್ರಸಿದ್ಧಿಯಾಗಿರುವ ಈ ತಳಿಯನ್ನು ಟಿ.ಎನ್-1 ಮತ್ತು ಸಿಓ-29 ಎಂಬ ತಳಿಗಳ ಸಂಕರಣದಿಂದ ಆಬಿವೃದ್ಧಿ ಪಡಿಸಲಾಗಿದೆ.  120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವ ಈ ತಳಿಯು ಬರ ನಿರೋಧಕ ಶಕ್ತಿಯನ್ನು ಹೊಂದಿದೆ.  ಆದುದರಿಂದ ನೀರಿನ ತೊಂದರೆ ಇರುವ ಕಾಲುವೆಯ ಕೊನೇ ಪ್ರದೇಶಗಳಿಗೆ ಹಾಗೂ ಪುಣಜಿ ಬೇಸಾಯಕ್ಕೆ ಇದು ಅತ್ಯಂತ ಸೂಕ್ತ ತಳಿ.  ಕಾಳು ಮಧ್ಯಮ ದಪ್ಪವಾಗಿದ್ದು ಎಕರೆಗೆ 22 ರಿಂದ 24 ಕ್ವಿಂಟಾಲ್ ಇಳುವರಿ ಸಾಮಥ್ರ್ಯ ಪಡೆದಿದೆ.

 

                        ಮಂಗಳ: ಇದು ಒಂದು ಅತ್ಯಂತ ಅಲ್ಪಾವಧಿ ತಳಿ, 110 ರಿಂದ 115 ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುತ್ತದೆ.  ತುಂಬಾ ಬೇಗ ಕಟಾವಿಗೆ ಬರುವುದರಿಂದ ನೀರಿನ ಲಭ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿ ವಿಶೇಷವಾಗಿ ಕೆರೆ ಆಶ್ರಯಗಳಲ್ಲಿ ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆಯಲು ಇದು ಅತ್ಯಂತ ಸೂಕ್ತ ತಳಿ.  ಸ್ವಲ್ಪ ಮಟ್ಟಿಗೆ ಚಳಿ ಹಾಗೂ ಚೌಳು ನಿರೋಧಕ ಶಕ್ತಿಯನ್ನೂ ಹೊಂದಿದೆ.  ಮುಂಗಾರಿನಲ್ಲಿ ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಒಟ್ಲು ಹಾಕಿ ಸೆಪ್ಟಂಬರ್ ಮೊದಲ ವಾರದೊಳಗೆ ನಾಟಿ ಮಾಡಬೇಕು.  ಈ ತಳಿಯ ಕಾಳುಗಳು ಮಧ್ಯಮ ದಪ್ಪವಾಗಿದ್ದು ಉತ್ತಮ ನಿರ್ವಹಣೆಯಲ್ಲಿ ಎಕರೆಗೆ 16 ರಿಂದ 18 ಕ್ವಿಂಟಾಲ್ ಇಳುವರಿ ಕೊಡುತ್ತದೆ.

 

                        ರಕ್ಷಾ : ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ತಳಿಯು 110-115 ದಿನಗಳಲ್ಲಿ ಕಟಾವಿಗೆ ಸಿದ್ದವಾಗುತ್ತದೆ.  ಇದನ್ನು ಮುಂಗಾರಿನಲ್ಲಿ ಆಗಸ್ಟ್ ತಿಂಗಳ ಕೊನೆಯವರೆಗೂ ಮತ್ತು ಬೇಸಿಗೆಯಲ್ಲಿ ಫೆಬ್ರವರಿ ಮೊದಲ ವಾರದವರೆಗೂ ಬಿತ್ತನೆ ಮಾಡಬಹುದು.  ಬೆಂಕಿರೋಗಕ್ಕೆ ಸಹಿಷ್ಣತೆ ಹೊಂದಿರುವ ಈ ತಳಿಯ ಕಾಳುಗಳು ಸಣ್ಣದಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿದೆ.  ನೀರಾವರಿ ಲಭ್ಯತೆ ಕಡಿಮೆ ಇರುವ ಕಾಲುವೆ ಕೊನೆ ಭಾಗಗಳು, ಬಾವಿ ನೀರಾವರಿ ಪ್ರದೇಶಗಳು ಹಾಗೂ ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ಈ ತಳಿಯು ಹೆಚ್ಚು ಅನುಕೂಲ.  ಮಧ್ಯಮ ಎತ್ತರ ಬೆಳೆಯುವ ಉತ್ತಮ ಬೆಳೆಯೊಂದರಿಂದ ಎಕರೆಗೆ 22-24 ಕ್ವಿಂಟಾಲ್ ಇಳುವರಿ ಪಡೆಯಬಹುದು.

 

 

ಮಧ್ಯಮಾವಧಿ ತಳಿಗಳು

           ತನು: ತಳಿಯನ್ನು ಮಂಡ್ಯ ವಿಜಯ ಮತ್ತು ಬಿಳಿಮುಕ್ತಿ ತಳಿಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆಮಸ್ಸೂರಿ ಭತ್ತದಂತೆ ಉತ್ಕೃಷ್ಟ ಅಕ್ಕಿಯ ಗುಣ ಹೊಂದಿರುವ ತಳಿ 130 ರಿಂದ 135 ದಿನಗಳಲ್ಲಿ ಕಟಾವಿಗೆ ಬರುತ್ತದೆ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದುಆಕರ್ಷಕ ಬಣ್ಣ ಹೊಂದಿರುವ ಇದು ಮಧ್ಯಮ ಎತ್ತರದಿಂದ ಕೂಡಿದ್ದು ಅಧಿಕ ಧಾನ್ಯ ಮತ್ತು ಹುಲ್ಲಿನ ಇಳುವರಿ ನೀಡುತ್ತದೆಉತ್ತಮ ಬೆಳೆಯೊಂದರಿಂದ ಎಕರೆಗೆ 26 ರಿಂದ 28 ಕ್ವಿಂಟಾಲ್ ಇಳುವರಿ ಪಡೆಯಬಹುದು.

 

           ಎಂ.ಟಿ.ಯು-1001: ವಿಜೇತ ಎಂದು ಕರೆಯಲ್ಪಡುವ ತಳಿಯೂ ಸಹ 130 ರಿಂದ 135 ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದುಮಧ್ಯಮ ಎತ್ತರದ ತಳಿಯು ಕಂದು ಜಿಗಿ ಹುಳುವಿಗೆ ಸಹಿಷ್ಣತೆ ಹೊಂದಿದೆಇದರ ಕಾಳು ದಪ್ಪವಾಗಿದ್ದು ಎಕರೆಗೆ 28 ರಿಂದ 30 ಕ್ವಿಂಟಾಲ್ ಇಳುವರಿ ಸಾಮಥ್ರ್ಯ ಹೊಂದಿದೆ.

 

            ವಿಕಾಸ್: ತಳಿಯೂ ಸಹ ಬಿತ್ತನೆಯಿಂದ ಕಟಾವಿಗೆ 130 ರಿಂದ 135 ದಿನಗಳನ್ನು ತೆಗೆದುಕೊಳ್ಳುತ್ತದೆಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತಮದ್ಯಮ ಎತ್ತರ ಬೆಳೆಯುವ, ಉದ್ದವಾದ ಸಣ್ಣ ಕಾಳಿನ ಗುಣ ಹೊಂದಿರುವ ತಳಿಯು ಚೌಳು ಮತ್ತು ಕರಲು ಮಣ್ಣಿಗೆ ಸಹಿಷ್ಣುತೆಯನ್ನು ಹೊಂದಿದೆಆದುದರಿಂದ ಇದನ್ನು ಚೌಳು ಮತ್ತು ಕರಲು ಮಣ್ಣಿನ ಪ್ರದೇಶಗಳಲ್ಲಿ ಯಶಸ್ವಿಯಾಗಿ ಬೆಳೆಯಬಹುದುಉತ್ತಮ ಬೆಳೆಯೊಂದರಿಂದ ಆರೋಗ್ಯವಂತ ಮಣ್ಣಿನಲ್ಲಿ ಎಕರೆಗೆ 24 ರಿಂದ 26 ಹಾಗೂ ಚೌಳು ಮತ್ತು ಕರಲು ಮಣ್ಣಿನಲ್ಲಿ 14 ರಿಂದ 16 ಕ್ವಿಂಟಾಲ್ ಇಳುವರಿ ಪಡೆಯಬಹುದು.

 

             .ಆರ್-30864: ಇದನ್ನು .ಆರ್-1738, .ಆರ್-7801, .ಆರ್-46 ಮತ್ತು ಕವಾಲೊ ಎಂಬ ನಾಲ್ಕು ವಿವಿಧ ತಳಿಗಳ ಸಂಕರಣದಿಂದ ಪಡೆಯಲಾಗಿದೆ.  130 ರಿಂದ 135 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು ತಳಿಯು ಚೌಳು ನಿರೋಧಕತೆ ಹೊಂದಿರುವುದರಿಂದ ಚೌಳು ಭೂಮಿಯಲ್ಲಿ ಬೆಳೆಯಲು ಅತ್ಯಂತ ಸೂಕ್ತವಾಗಿದೆಇದರ ಕಾಳು ಮಧ್ಯಮ ಸಣ್ಣದಾಗಿದ್ದು ಗಿರಣಿಯಲ್ಲಿ ಉತ್ತಮ ಅಕ್ಕಿಯ ಅಧಿಕ ಇಳುವರಿ ಸಿಗುತ್ತದೆ ಹಾಗೂ ಈ ತಳಿಯ ಅಕ್ಕಿಯು ಅನ್ನ ಮಾಡಲು ಅತ್ಯಂತ ಸೂಕ್ತವಾಗಿದೆ.  ಉತ್ತಮ ಬೆಳೆಯೊಂದರಿಂದ ಎಕರೆಗೆ 28 ರಿಂದ 30 ಕ್ವಿಂಟಾಲ್ ಇಳುವರಿ ಪಡೆಯಬಹುದು.

 

                       ಐ.ಆರ್-20: 130 ರಿಂದ 135 ದಿನಗಳಲ್ಲಿ ಕೊಯ್ಲಿಗೆ ಬರುವ ಈ ತಳಿಯನ್ನು ಐ.ಆರ್-26 ಮತ್ತು ಟಿ.ಕೆ.ಎಂ-6 ತಳಿಗಳನ್ನು ಉಪಯೋಗಿಸಿ ಅಭಿವೃದ್ಧಿ ಪಡಿಸಲಾಗಿದೆ.  ಜುಲೈ ತಿಂಗಳ ಎರಡನೇ ವಾರದವರೆಗೂ ಬಿತ್ತನ ಮಾಡಬಹುದಾದ ಈ ತಳಿಯು ಜಯ ಮತ್ತು ವಿಕಾಸ್ ತಳಿಯಂತೆ ಗಿಡ್ಡವಾಗಿರುತ್ತದೆ.  ಮಧ್ಯಮ ಸಣ್ಣ ಗಾತ್ರದ ಕಾಳನ್ನು ಹೊಂದಿರುವ ಇದು ಅನ್ನ ಮಾಡಲು ಅತ್ಯಂತ ಸೂಕ್ತವಾಗಿದ್ದು ಗಿರಣಿಯಲ್ಲಿ ಹೆಚ್ಚು ನುಚ್ಚಾಗುವುದಿಲ್ಲ.  ಈ ತಳಿಯ ಉತ್ತಮ ಬೆಳೆಯೊಂದರಿಂದ ಎಕರೆಗೆ 24 ರಿಂದ 26 ಕ್ವಿಂಟಾಲ್ ಕಾಳಿನ ಇಳುವರಿ ಪಡೆಯಬಹುದು.

 

                      ಐ.ಆರ್-64: ಫಿಲಿಫೈನ್ಸ್ ದೇಶದಲ್ಲಿರುವ ಅಂತರರಾಷ್ಟ್ರೀಯ ಭತ್ತದ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಇದು ಒಂದು ಅಂತರರಾಷ್ಟ್ರೀಯ ಭತ್ತದ ತಳಿ.  125-130 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವ ಈ ತಳಿಯನ್ನು ಮುಂಗಾರು ಹಂಗಾಮಿನಲ್ಲಿ ಜುಲೈ ಎರಡನೇ ವಾರದವರೆಗೂ ಬಿತ್ತನೆ ಮಾಡಬಹುದು.  ಈ ತಳಿಯ ಕಾಳು ಮಧ್ಯಮ ಗಾತ್ರದಿಂದ ಕೂಡಿದ್ದು ಉದ್ದವಾಗಿರುತ್ತದೆ.  ಈ ತಳಿಗೆ ಬೆಂಕಿ ರೋಗದ ಬಾಧೆ ಕಂಡುಬರುವುದರಿಂದ ರೈತರು ಇದರ ಬಗೆಗೆ ವಿಶೇಷ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.  ಉತ್ತಮ ಬೆಳೆಯೊಂದರಿಂದ ಎಕರೆಗೆ 24 ರಿಂದ 26 ಕ್ವಿಂಟಾಲ್‍ಗಳಷ್ಟು ಕಾಳಿನ ಇಳುವರಿ ಪಡೆಯಬಹುದು.

 

                        ಕೆ.ಸಿ.ಪಿ-1 : ಈ ತಳಿಯು 130-135 ದಿನಗಳಲ್ಲಿ ಕಟಾವಿಗೆ ಸಿದ್ದವಾಗುತ್ತದೆ.  ಈ ತಳಿಯನ್ನು ಜುಲೈ ತಿಂಗಳ ಎರಡನೇ ವಾರದಲ್ಲಿ ಬಿತ್ತನೆ ಮಾಡಿ ಆಗಸ್ಟ್ ತಿಂಗಳ ಎರಡನೇ ವಾರದೊಳಗೆ ನಾಟಿ ಮಾಡುವುದು ಸೂಕ್ತ. ಬೇಸಿಗೆ ಹಂಗಾಮಿನಲ್ಲಿ ಈ ತಳಿಯನ್ನು ಬಿತ್ತನೆ ಮಾಡಲು ಜನವರಿ 2 ನೇ ವಾರ ಅತ್ಯಂತ ಸೂಕ್ತವಾದದ್ದು,  ಭತ್ತವು ದಪ್ಪವಾಗಿದ್ದು, ಜಯ ತಳಿಯನ್ನು ಹೊಲುತ್ತದೆ.  ಗಿಡವು ಎತ್ತರವಾಗಿ ಬೆಳೆಯುವುದರಿಂದ ಸಾರಜನಕದ ಗೊಬ್ಬರವನ್ನು ಶಿಫಾರಸ್ಸಿಗಿಂತ ಹೆಚ್ಚು ಬಳಸಬಾರದು.  ಉತ್ತಮ ಬೆಳೆಯೊಂದರಿಂದ ಎಕರೆಗೆ 26-28 ಕ್ವಿಂಟಾಲ್ ಇಳುವರಿ ಪಡೆಯಬಹುದಾಗಿದೆ. 

 

ಚಳಿ ನಿರೋಧಕ ತಳಿಗಳು

          ಭತ್ತವು ಹೂ ಬಿಡುವ ಸಂದರ್ಭದಲ್ಲಿ ಚಳಿ ಹೆಚ್ಚಾಗಿ ವಾತಾವರಣದಲ್ಲಿನ ಉಷ್ಣಾಂಶವು ಕಡಿಮೆಯಾದರೂ ಸಹಜ ಪರಾಗಸ್ಪರ್ಶ ಕ್ರಿಯೆಯೊಡನೆ ಉತ್ತಮ ಕಾಳಿನ ಇಳುವರಿ ನೀಡುವ ತಳಿಗಳನ್ನು ಚಳಿ ನಿರೋಧಕ ತಳಿಗಳೆಂದು ಕರೆಯಲಾಗುತ್ತದೆ.  ಪ್ರಸ್ತುತ ಕರ್ನಾಟಕದ ದಕ್ಷಿಣ ಪ್ರದೇಶಗಳಿಗೆ ಎರಡು ಚಳಿ ನಿರೋಧಕ ತಳಿಗಳನ್ನು ಬಿಡುಗಡೆ ಮಾಡಲಾಗಿದೆ.

 

                        ಮುಕ್ತಿ (ಸಿ.ಟಿ.ಹೆಚ್-1): ಇದನ್ನು ಎಸ್.ಐ.ರೆನ್ಹ ಮೆಹ್ರಾ ಮತ್ತು ಐ.ಆರ್-2153 ತಳಿಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ.  ಈ ತಳಿಯ ಕಾಳು ದಪ್ಪವಾಗಿದ್ದು ಅಕ್ಕಿಯು ಕೆಂಪಾಗಿರುತ್ತದೆ.  125 ರಿಂದ 130 ದಿನಗಳಲ್ಲಿ ಕೊಯ್ಲಿಗೆ ಬರುವ ಈ ತಳಿಯನ್ನು ಆಗಸ್ಟ್ ಕೊನೆಯವರೆಗೂ ಬಿತ್ತನೆ ಮಾಡಿ ಸೆಪ್ಟಂಬರ್ ಕೊನೆಯವರೆಗೂ ನಾಟಿ ಮಾಡಬಹುದು.  ಇದು ಎಕರೆಗೆ 18 ರಿಂದ 20 ಕ್ವಿಂಟಾಲ್ ಇಳುವರಿ ನೀಡುತ್ತದೆ.

 

                         ಬಿಳಿಮುಕ್ತಿ (ಸಿ.ಟಿ.ಹೆಚ್-3): ಮುಕ್ತಿ ತಳಿಯಿಂದ ಪುನರಾಯ್ಕೆ ಮಾಡಲ್ಪಟ್ಟಿರುವ ಈ ತಳಿಯು 120 ರಿಂದ 125 ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುತ್ತದೆ.  ಇದು ಮುಕ್ತಿ ತಳಿಗಿಂತ ಸ್ವಲ್ಪ ಕಡಿಮೆ ಎತ್ತರ ಬೆಳೆಯುತ್ತದೆ.  ಕಾಳು ಮುಕ್ತಿ ಭತ್ತದಂತೆ ದಪ್ಪವಾಗಿರುತ್ತದೆಯಾದರೂ ಅಕ್ಕಿ ಬೆಳ್ಳಗಿರುತ್ತದೆ.  ಆಗಸ್ಟ್ ತಿಂಗಳ ಕೊನೆಯವರೆಗೂ ಬಿತ್ತನೆ ಮಾಡಿ ಸೆಪ್ಟಂಬರ್ ಕೊನೆಯವರೆಗೆ ನಾಟಿ ಮಾಡಬಹುದು.  ಎಕರೆಗೆ 20 ಕ್ವಿಂಟಾಲ್ ಗಳವರೆಗೂ ಇಳುವರಿ ಸಾಮಥ್ರ್ಯ ಹೊಂದಿರುವ ಈ ತಳಿಯನ್ನು ತಡವಾದ ಮುಂಗಾರಿನಲ್ಲಿ ಮುಕ್ತಿ ತಳಿಯ ಬದಲಿಗೆ ಉಪಯೋಗಿಸಬಹುದು.

 

ಹೈಬ್ರಿಡ್ ತಳಿಗಳು

          ಕೆ.ಆರ್.ಹೆಚ್-2: ಈ ತಳಿಯನ್ನು ಐ.ಆರ್-58025 ಎ ಮತ್ತು ಕೆ.ಎಂ.ಆರ್-3ಆರ್ ಎಂಬ ತಳಿಗಳ ಸಂಕರಣದಿಂದ ಉತ್ಪಾದನೆ ಮಾಡಲಾಗುತ್ತದೆ.  130-135 ದಿನಗಳಲ್ಲಿ ಕಟಾವಿಗೆ ಸಿದ್ದವಾಗುವ ಈ ಹೈಬ್ರಿಡ್ ತಳಿಯು ಎಕರೆಗೆ ಸರಾಸರಿ 35-40 ಕ್ವಿಂಟಾಲ್ ಇಳುವರಿ ಕೊಡುವ ಸಾಮಥ್ರ್ಯ ಹೊಂದಿದೆ.  ಜಯ ತಳಿಗಿಂತ ಹೆಚ್ಚು ಎತ್ತರ ಬೆಳೆಯುವುದರಿಂದ ಅಧಿಕ ಹುಲ್ಲನ್ನೂ ಸಹ ಕೊಡುವ ಈ ಹೈಬ್ರಿಡ್ ಭತ್ತಕ್ಕೆ ಬೆಂಕಿ ರೋಗದ ಬಾಧೆಯೂ ಕಡಿಮೆ.

 

                  ಕೆ.ಆರ್.ಹೆಚ್-4: ಈ ತಳಿಯು ಸಂಕರಣ ತಳಿಯಾಗಿದ್ದು ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿ ಪಡಿಸಲಾಗಿದೆ.  ಈ ಸಂಕರಣ ತಳಿಯು 130-135 ದಿನಗಳಲ್ಲಿ ಕಟಾವಿಗೆ ಸಿದ್ದವಾಗುತ್ತದೆ.  ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದುಬೇಸಿಗೆ ಹಂಗಾಮಿನಲ್ಲಿ ಈ ತಳಿಯನ್ನು ಬಿತ್ತನೆ ಮಾಡಲು ಜನವರಿ 2 ನೇ ವಾರ ಅತ್ಯಂತ ಸೂಕ್ತವಾದದ್ದು. ಈ ತಳಿಯ ಕಾಳು ಮಧ್ಯಮ ಸಣ್ಣದಾಗಿದ್ದು, ಅಕ್ಕಿಯು ಅನ್ನ ಮಾಡಲು ಅತ್ಯಂತ ಸೂಕ್ತವಾಗಿದೆ.  ಈ ಸಂಕರಣ ತಳಿಯು ಎಕರೆಗೆ 34-36 ಕ್ವಿಂಟಾಲ್ ಇಳುವರಿ ಸಾಮರ್ಥ್ಯ ಹೊಂದಿದೆ.

 

          ಮೇಲೆ ತಿಳಿಸಿರುವ ಎಲ್ಲಾ ತಳಿಗಳು ಮತ್ತು ಹೈಬ್ರಿಡ್ ಭತ್ತವನ್ನು ಬೇಸಿಗೆ ಹಂಗಾಮಿನಲ್ಲಿಯೂ ಬೆಳೆಯಬಹುದು.  ರೈತರು ತಮಗೆ ದೊರೆಯುವ ನೀರಿನ ಪ್ರಮಾಣ ಹಾಗೂ ಮುಂಗಾರು ಹಂಗಾಮಿನ ಬೆಳೆ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಅನುಸಾರವಾಗಿ ಸೂಕ್ತ ಅವಧಿಯ ತಳಿಯನ್ನು ಆಯ್ಕೆ ಮಾಡಿಕೊಂಡು ಬೆಳೆಯಬೇಕು.ಜನವರಿ 3 ಮತ್ತು 4ನೇ ವಾರ ಸಸಿಮಡಿ ತಯಾರಿಕೆಗೆ ಹಾಗೂ ಫೆಬ್ರವರಿ 2 ಮತ್ತು 3ನೇ ವಾರ ನಾಟಿ ಮಾಡಲು ಸೂಕ್ತ ಕಾಲ. ಸಾಮಾನ್ಯವಾಗಿ ಬೇಸಿಗೆ ಬೆಳೆಯಲ್ಲಿ ಎಲ್ಲಾ ತಳಿಗಳು 8-10 ದಿನ ತಡವಾಗಿ ಕೊಯ್ಲಿಗೆ ಬರುತ್ತವೆ.

 

*********************

 

File Courtesy: 
ZARS,RKMP-Mandya
8
Dec

ಕೂರಿಗೆ ಬಳಕೆ ಖರ್ಚು ಉಳಿಕೆ

 ಕೂರಿಗೆ ಬಳಕೆ ಖರ್ಚು ಉಳಿಕೆ
ಹೊಸ ಕೂರಿಗೆಯಲ್ಲಿ ರೈತರ ಆಸಕ್ತಿ

ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ರಾಯಚೂರು ಜಿಲ್ಲೆಯ ಜೀವನಾಡಿ. ಈ ನದಿಗಳ ನೀರನ್ನು ಬಳಸಿ ರೈತರು ವರ್ಷದಲ್ಲಿ ಎರಡು ಭತ್ತದ ಬೆಳೆ ಬೆಳೆಯುತ್ತಾರೆ. ಆದರೆ, ಈ ವರ್ಷ ಎರಡನೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಜಲಾಶಯದಲ್ಲಿ ನೀರಿಲ್ಲ.ಮಲೆನಾಡು ಮತ್ತು ನೀರಾವರಿ ಪ್ರದೇಶಗಳಲ್ಲಿ ಭತ್ತದ ನಾಟಿ ಜತೆಗೆ ಬಿತ್ತುವುದೂ ಹೆಚ್ಚು ಪ್ರಚಲಿತದಲ್ಲಿದೆ. ಆದರೆ ರಾಯಚೂರು ಜಿಲ್ಲೆಯ ರೈತರು ನೀರು ಇಲ್ಲದೆ ಭತ್ತ ಬೆಳೆಯುವುದೇ ಇಲ್ಲ. 
ಅವರ ಈ ಸಂದಿಗ್ಧ ಅರಿತ ರಾಯಚೂರು ಕೃಷಿ ವಿವಿ ಉಸ್ತುವಾರಿ ಕುಲಪತಿಗಳಾದ ಎಸ್.ಜಿ. ಪಾಟೀಲ ಅವರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಹಕಾರದೊಂದಿಗೆ ಮಾನ್ವಿ ತಾಲೂಕಿನ ಶಿರವಾರ ಗ್ರಾಮದ ಶರಣಪ್ಪ ಖಾನಾಪುರ ಇವರ ಹೊಲದಲ್ಲಿ `ಶೂನ್ಯ ಬೇಸಾಯ ಕೂರಿಗೆ`ಯಲ್ಲಿ ಬಿತ್ತುವ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದರು. ಇದನ್ನು ನೋಡಲು ಆಸಕ್ತ ರೈತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
ಅಲ್ಲಿ ತಜ್ಞರು ಹೇಳಿದ್ದಿಷ್ಟು: ತುಂಗಭದ್ರಾ ನದಿ ಪಾತ್ರದಲ್ಲಿ ಸುಮಾರು 25 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿದೆ. ಇದಕ್ಕಾಗಿ ಭೂಮಿಯಲ್ಲಿ 15 ರಿಂದ 20 ಸೆಂ.ಮೀ ಆಳದವರೆಗೆ ಉಳುಮೆ ಮಾಡಲಾಗುತ್ತದೆ. ಈ ರೀತಿ ಉಳುಮೆಗೆ ಹೊಲವನ್ನು ಹದ (ಪಡ್ಲಿಂಗ್) ಮಾಡಲು ಹೆಚ್ಚು ಹಣ ಖರ್ಚಾಗುತ್ತದೆ.
ಹೆಚ್ಚು ನೀರು ನಿಲ್ಲಿಸುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತದೆ. ರಸಗೊಬ್ಬರ, ಕೀಟನಾಶಕ ಬಳಕೆ ಹೆಚ್ಚಾಗುತ್ತದೆ.ಸಾಮಾನ್ಯವಾಗಿ ರೈತರು ಗದ್ದೆಯಲ್ಲಿ ಹೆಚ್ಚು ನೀರು ನಿಲ್ಲಿಸಿ ಕೆಸರನ್ನು ಹದ ಮಾಡಿ ಭತ್ತದ ಸಸಿ ನಾಟಿ ಮಾಡುತ್ತಾರೆ. ಸದಾ ನೀರು ನಿಲ್ಲಿಸುವುದರಿಂದ ಜೌಗು ಸಮಸ್ಯೆ ಹೆಚ್ಚುತ್ತಿದೆ. ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
 ಆದ ಕಾರಣ ನಾಟಿ ಪದ್ಧತಿ ಬಿಟ್ಟು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಬೇಸಾಯ ಕ್ರಮದಲ್ಲಿ ಬದಲಾವಣೆಯ ಅನಿವಾರ್ಯತೆ ಇದೆ. ಮೊದಲ ಹಂತವಾಗಿ ನೀರನ್ನು ಉಳಿಸುವತ್ತ ಹೆಜ್ಜೆ ಇಡಬೇಕಾಗಿದೆ. ಅದಕ್ಕಾಗಿ ಭತ್ತವನ್ನು ನಾಟಿ ಮಾಡುವ ಬದಲಾಗಿ ಬಿತ್ತುವುದಕ್ಕೆ ಆದ್ಯತೆ ಕೊಡಬೇಕಾಗಿದೆ.
ಇದೇ ಸಂದರ್ಭದಲ್ಲಿ ಟ್ರಾಕ್ಟರ್‌ಗೆ `ಶೂನ್ಯ ಬೇಸಾಯ ಕೂರಿಗೆ` ಜೋಡಿಸಿ ಬಿತ್ತನೆ ಮಾಡುವ ವಿಧಾನ ತೋರಿಸಲಾಯಿತು. ಇದರಲ್ಲಿ ಬಿತ್ತನೆಗೆ ಮೊದಲು ಹೊಲವನ್ನು ಹದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಹೊಲದಲ್ಲಿ ಕಸ-ಕಡ್ಡಿ, ಹುಲ್ಲು ಇರುವಾಗಲೇ ಬಿತ್ತನೆ ಮಾಡಬಹುದು.
 

 

ಹೊಲ ತೇವಾಂಶದಿಂದ ಕೂಡಿದ್ದರೂ ಬಿತ್ತನೆ ಮಾಡಿ ಒಂದು ವಾರದೊಳಗೆ ತೆಳುವಾಗಿ ನೀರು ಹಾಯಿಸಿದರೆ ಸಾಕು ಅಥವಾ ಮಳೆ ಬರುವ ಮುನ್ಸೂಚನೆ ಇರುವಾಗಲೇ ಒಣ ಭೂಮಿಯಲ್ಲೆ ಬಿತ್ತನೆ ಮಾಡಬಹುದು. ಬಿತ್ತನೆ ಮಾಡಿದ 15 ದಿನದೊಳಗೆ ಮಳೆ ಬರದೇ ಇದ್ದರೆ ತೆಳುವಾಗಿ ನೀರು ಹಾಯಿಸಬೇಕು. 
ಹೀಗೆ ಬಿತ್ತನೆ ಮಾಡುವುದರಿಂದ
* ಶೇ 30ರಿಂದ 47ರಷ್ಟು ನೀರಿನ ಉಳಿತಾಯ ಆಗುತ್ತದೆ.
* ಉಳುಮೆ ಖರ್ಚು ಕಡಿಮೆ ಆಗುತ್ತದೆ.
* ಕಲುಷಿತ ವಾತಾವರಣ ಕಡಿಮೆ ಆಗುತ್ತದೆ.
* ಮಣ್ಣಿನ ಸವಕಳಿ ಕಡಿಮೆ ಆಗುತ್ತದೆ.
* ಬಿತ್ತನೆ ಸಮಯದಲ್ಲಿ ಕಸ-ಕಡ್ಡಿ, ಹುಲ್ಲು ಮಣ್ಣೊಳಗೆ ಸೇರುವುದರಿಂದ ಮಣ್ಣಿನ
 ಫಲವತ್ತತೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
* ಸಮಯದ ಉಳಿತಾಯ ಆಗುತ್ತದೆ.
* ಮಣ್ಣಿನ ಸಾಂದ್ರತೆ/ ಕ್ಷಾರ ಹೆಚ್ಚುತ್ತದೆ.
* ಮಣ್ಣಿನಲ್ಲಿ ಲವಣ ಶಕ್ತಿ ಹಾಗೆ ಉಳಿಯುತ್ತದೆ.
* ರೋಗ ನಿಯಂತ್ರಣ ಶಕ್ತಿ ಬರುವುದರಿಂದ ಕಡಿಮೆ ಪ್ರಮಾಣದ ರಸಗೊಬ್ಬರ,
 ಕೀಟನಾಶಕ ಬಳಕೆ.
* ನಾಟಿಯಲ್ಲಿ ಒಂದು ಎಕರೆಗೆ 20 ರಿಂದ 25 ಕಿಲೊ ಬೀಜ ಬೇಕು. ಆದರೆ ಕೂರಿಗೆಯಲ್ಲಿ ಬಿತ್ತನೆಗೆ 8 ರಿಂದ 10 ಕಿಲೊ ಸಾಕು.
* ಆಳಿನ ಖರ್ಚು ಉಳಿತಾಯ.
* ಇಳುವರಿ ಹೆಚ್ಚುತ್ತದೆ.
ಕೂರಿಗೆ ಬಿತ್ತನೆಯ ಲಾಭಗಳನ್ನು ಪಟ್ಟಿ ಮಾಡಿ ಹೇಳುವ ಸಮಯದ್ಲ್ಲಲೇ ರೈತರೊಬ್ಬರಿಂದ ಪ್ರಶ್ನೆ ತೂರಿ ಬಂತು; `ಸಾಹೇಬರಿಗೆ ಏನ್ ಗೊತ್ತಾಗ್ತದರೀ? ಪುಸ್ತಕದಾಗ ಓದ್ಯಾರ; ಬಂದು ಹೇಳತಾರ್, ಬಿತ್ತಗಿ ಮಾಡಿದ ಅನುಭವ ಇರೋ ರೈತನಿಂದ ಹೇಳಸರೀ`.

ತಕ್ಷಣವೇ ರೈತ ಸಿದ್ಧರಾಮಯ್ಯಸ್ವಾಮಿ ಎದ್ದು ನಿಂತು ಹೇಳಿದರು. `ನಾನು ಮೊದಲ್ ಇದನ್ನ ನಂಬಿರಲಿಲ್ಲಾ, ಯಾತಕ್ಕೂ ಇರ್ಲಿ ಅಂತಾ 1 ಎಕರೆ ಬಿತ್ತಿದೆ. ಬಿತ್ತಗಿ ಮತ್ತ ಆಳಿನ ಖರ್ಚು ಕಡಿಮಿ ಆತು. ಮುಂಚೆ ಸರಾಸರಿ ಎಕರೆಕ 35 ಚೀಲ ಭತ್ತ ಬರ್ತಿತ್ತು. ಕೂರಿಗೆ ಬಿತ್ತನೆ ನಂತ್ರ 48 ಚೀಲ ಇಳುವರಿ ಬಂದೇತಿ ನೋಡ್ರಪಾ` ಎಂದು ಹೇಳಿದಾಗ ರೈತರ ಅನುಮಾನ ದೂರವಾಗಿತ್ತು. 
ಮಾಹಿತಿಗೆ ಪಾಟೀಲರ ಸಂಪರ್ಕ ಸಂಖ್ಯೆ 94806 96301.


ಭತ್ತ ಬಿತ್ತನೆಗೆ ಇದೇ ಕೂರಿಗೆ




File Courtesy: 
ZARS,RKMP-Mandya
7
Dec

ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ

 ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ
ಭತ್ತ ಕರ್ನಾಟಕ ರಾಜ್ಯದ ಬಹು ಮುಖ್ಯ ಆಹಾರ ಬೆಳೆರಾಜ್ಯದಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ  ಬೆಳೆಯಲಾಗುತ್ತಿದೆಭತ್ತಕ್ಕೆ ಕರ್ನಾಟಕದಾದ್ಯಂತ 24 ಹೆಚ್ಚು ಕೀಟಗಳು ಕಂಡುಬಂದರೂ, ಕೆಲವೇ ಕೀಟಗಳು ಪ್ರಮುಖ ಪೀಡೆಗಳಾಗಿವೆ. ಬೆಳೆಗೆ ಬಿತ್ತನೆ ಮಾಡಿದಾಗಿನಿಂದ ಹಿಡಿದು ಕಟಾವಾಗುವವರೆಗೂ ಒಂದಲ್ಲ ಒಂದು ರೀತಿಯ ಕೀಟ ಬಾದೆ ಇದ್ದೆ ಇರುತ್ತದೆ. ಕೀಟಗಳ ಭಾದೆ ಸಸಿ ಮಡಿಯಲ್ಲಿರಬಹುದು. ತೆಂಡೆಯೊಡೆಯುವ ಸಮಯದಲ್ಲಿರಬಹುದು ಅಥವಾ ಕಾಳು ಕಟ್ಟುವ ಸಮಯದಲ್ಲಿರಬಹುದು. ಆದ್ದರಿಂದ  ಕೀಟಗಳ  ಹಾವಳಿಯನ್ನು ಅರಿತು ಸಮರ್ಪಕ ಹತೋಟಿ ಕ್ರಮಗಳನ್ನು  ತೆಗೆದುಕೊಳ್ಳುವುದು ಅತ್ಯವಶ್ಯ.

ಭತ್ತದ ಕೀಟಗಳನ್ನು ಬೆಳೆಯನ್ನು ಬಾಧಿಸುವ ಹಂತದ ಆನುಗುಣವಾಗಿ ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು

1. ಸಸಿ ಮಡಿಯಲ್ಲಿ ಬರುವ ಕೀಟಗಳು : ಥ್ರಿಪ್ಸ್ ನುಸಿ, ಗರಿಜಿಗಿ ಹುಳು ಹಾಗೂ ಹಳದಿ ಕಾಂಡ ಕೊರಕ.
2. ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ 0ತದಿ0 ಕಾಳು ಕಟ್ಟುವ 0ತದವರಗೆ ಬರುವ ಕೀಟಗಳು : ಹಳದಿ ಕಾಂಡ ಕೊರಕ. ಕೊಳವೆ ಹುಳು, ಗರಿ ಸುತ್ತುವ ಹುಳ, ಕಂದು ಜಿಗಿಹುಳ, ಮುಳ್ಳುಚಿಪ್ಪಿನ ದುಂಬಿ,ಕಂದುಜಿಗಿಹುಳು, ತೆನೆ ತಿಗಣೆ
ಸಸಿ ಮಡಿಯಲ್ಲಿ ಬರುವ ಕೀಟಗಳು

ಥ್ರಿಪ್ಸ್ ನುಸಿ

ಕೀಟವು ತುಂಬಾ ಚಿಕ್ಕದಾಗಿದ್ದು (1-2 ಮಿ.ಮಿ.) ಎಲೆಯ ಮೇಲಿದ್ದುಕೊಂಡು ರಸವನ್ನು ಹೀರುತ್ತದೆಇವುಗಳು ಇತರೆ ಬೆಳೆಗಳ ಮೇಲೆ ಬರುವ ಥ್ರಿಪ್ಸ್ ನುಸಿಗಿಂತ ಸ್ವಲ್ಪ ದೊಡ್ಡದಾಗಿರುತ್ತವೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸಸಿ ಮಡಿಯಲ್ಲಿ ಕಾಣಿಸಿಕೊಳ್ಳುತ್ತವೆ. ಮರಿ ಮತ್ತು ಪ್ರೌಢ ಕೀಟಗಳೆರಡು ಎಲೆಗಳ ರಸವನ್ನು ಹೀರುವುದರಿಂದ ಎಲೆಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಸುಟ್ಟು ಹೋದಂತಾಗುತ್ತವೆಎಲೆ ಒಣಗುವಿಕೆ ಮೊದಲು ತುದಿಯಿಂದ ಆರಂಭವಾಗಿ ನಂತರ ಇಡೀ ಎಲೆಗಳಿಗೆ ವ್ಯಾಪಿಸಿ ಎಲೆಯು ನೀಳವಾಗಿ ಮಡಚಿಕೊಳ್ಳುತ್ತದೆಮಡಚಿದ ಎಲೆ ಈರುಳ್ಳಿಯ ಎಲೆಯನ್ನು ಹೋಲುತ್ತದೆ ಹಾಗೂ ಇಡಿ ಎಲೆ0iÉುೀ ಒಣಗಿ ಹೋಗುತ್ತದೆ.

 ಗರಿಜಿಗಿ ಹುಳು

ಪ್ರೌಢ ಮತ್ತು ಮರಿಕೀಟಗಳು ಗರಿಗಳಿಂದ  ರಸ ಹೀರುತ್ತವೆ. ಇದರಿಂದಾಗಿ ಗರಿಗಳ ಮೇಲೆ ಅಲ್ಲಲ್ಲಿ ಬಿಳಿ ಮಚ್ಚೆಗಳು  ಕಾಣಿಸಿಕೊಳ್ಳುತ್ತವೆಹುಳುಗಳ ಬಾದೆ ಹೆಚ್ಚಾದಂತೆ ಗರಿಗಳು  ಸುಟ್ಟಂತೆ ಕಾಣುತ್ತವೆಕೀಟಗಳಿರುವುದನ್ನು ವೀಕ್ಷಿಸುವುದು ಸುಲಭಸಸಿಗಳನ್ನು ಕೈಯಿಂದಲೋ ಅಥವಾ ಒಂದು ಕೋಲಿಂದಲೋ ಅಲುಗಾಡಿಸಿದರೆ ಪ್ರೌಢ ಕೀಟಗಳು ಹಾರುವುದು ಅಥವ   ಜಿಗಿಯುತ್ತಿರುವುದನ್ನು ನೋಡಬಹುದು. ಕೀಟದ ಬಾಧೆ ಹೆಚ್ಚಾಗಿ ಸಸಿ ಮಡಿಯಲ್ಲಿ ನೀರಿನ ಅಭಾವ ಇದ್ದಾಗ ಉಲ್ಭಣಗೊಳ್ಳುತ್ತದೆಆದ್ದರಿಂದ ಸಸಿಮಡಿಯಲ್ಲಿ ಸಮರ್ಪಕವಾಗಿ ನೀರು ಇರುವಂತೆ ನೋಡಿಕೊಳ್ಳಬೇಕು ಕೀಟವು ಬದುವಿನ ಮೇಲಿರುವ ಕಸಗಳಿಂದ ಭತ್ತಕ್ಕೆ ಬರುವುದರಿಂದ ಬದುವನ್ನು ಸ್ವಚ್ಚವಾಗಿಡುವುದು ಒಳಿತು

 ಹಳದಿ ಕಾಂಡ ಕೊರೆಕ

ಕೀಟವು ಭತ್ತದ ಪ್ರಮುಖ ಪೀಡೆಯಾಗಿದ್ದು, ಮುಂಗಾರು ಮತ್ತು ಹಿಂಗಾರಿ ಭತ್ತ ಎರಡರಲ್ಲೂ ಕಂಡುಬರುತ್ತದೆಕೀಟದ ಪತಂಗ ಹಳದಿ ಬಣ್ಣದ್ದಾಗಿದ್ದು, ಹೆಣ್ಣಿನ ಹೊಟ್ಟೆಯ ತುದಿಯಲ್ಲಿ ಕಂದು ಬಣ್ಣದ ಬಿರುಗೂದಲಿನ ಸಮೂಹ ಮತ್ತು ಮುಂಬದಿಯ ರೆಕ್ಕಗಳಲ್ಲಿ ಒಂದೊಂದು ಕಪ್ಪು ಚುಕ್ಕೆ ಇರುತ್ತದೆ.   ಗಂಡು ಪತಂಗದಲ್ಲಿ ಕಪ್ಪು ಚುಕ್ಕೆಗಳು ಕಾಣುವುದಿಲ್ಲಹೆಣ್ಣು ಪತಂಗ ಗಂಡು ಪತಂಗಕ್ಕಿಂತ ಗಾತ್ರದಲ್ಲಿ ದೊಡ್ದದುಪತಂಗಗಳು ರಾತ್ರಿ ವೇಳೆಯಲ್ಲಿ  ದೀಪದ ಬೆಳಕಿಗೆ ಆಕರ್ಷಿಸಲ್ಪಡುತ್ತವೆತಂಪಾದ ವೇಳೆಯಲ್ಲಿ ಅಂದರೆ ಬೆಳಗಿನ ಮತ್ತು ಸಾಯಂಕಾಲದ ವೇಳೆಯಲ್ಲಿ ಭತ್ತದ ಸಸಿ ಮಡಿಗಳಲ್ಲಿ ಪೈರಿನ ಗರಿಗಳ ಮೇಲೆ ಕುಳಿತಿರುತ್ತವೆ ಮತ್ತು ಹಾರಾಡುತ್ತಿರುವ ದೃಶ್ಯವನ್ನು  ಸಹ ನೋಡಬಹುದುಬಿಸಿಲಿನ ತಾಪ ಹೆಚ್ಚಾದಂತೆಲ್ಲ ಪತಂಗಗಳು ಸಸಿಗಳ ಗರಿಗಳ ತಳಭಾಗಕ್ಕೆ ಸರಿಯುತ್ತವೆ.

ಹೆಣ್ಣು ಪತಂಗ ತನ್ನ ಮೊಟ್ಟೆಗಳನ್ನು ಗರಿಗಳ ಹಿ0ಬಾಗದ ಮೇಲ್ತುದಿಯಲ್ಲ್ಲಿ ಗುಂಪು ಗುಂಪಾಗಿಡುತ್ತದೆಒಂದು ಗುಂಪಿನಲ್ಲಿ 8-15 ಮೊಟ್ಟೆಗಳಿದ್ದುಕಂದು ಬಣ್ಣದ ಬಿರುಗೂದಲಿನ ಸಮೂಹದಿಂದ ಮುಚ್ಚಿಲ್ಪಟ್ಟಿರುತ್ತವೆಮೊಟ್ಟೆಯಿಂದ ಹೊರಬಂದ ಮರಿಕೀಡೆ ಪೈರಿನ ಕಾಂಡದ ತಳಭಾಗವನ್ನು ಕೊರೆದು ಒಳ ಸೇರುತ್ತದೆಇದರಿಂದಾಗಿ ಪೈರಿನ ತಳ ಗರಿ ಹಳದಿ ಬಣ್ಣಕ್ಕೆ ತಿರುಗಿ  ಒಣಗಿದಂತೆ ಕಾಣುತ್ತವೆ ರೀತಿ ಹಳದಿ ಬಣ್ಣಕ್ಕೆ ತಿರುಗಿದಾಗ ರೈತರು  ಸಾರಜನಕದ ಕೊರತೆ ಇರಬಹುದೆಂದು ತಪ್ಪು ತಿಳಿದು ಯೂರಿಯಾ ಹಾಕುವುದು ಸರ್ವೇ ಸಾಮಾನ್ಯಹಳದಿ ಬಣ್ಣಕ್ಕೆ ತಿಗುರಿದ  ಪ್ಶೆರನ್ನು ಕಿತ್ತು ನೋಡಿದರೆ ಕಾಂಡದ ತಳಭಾಗದಲ್ಲಿ ಸಣ್ಣ ರಂಧ್ರವಿರುತ್ತದೆ ಮತ್ತು ಹುಳು ಬಿದ್ದ ಪೈರಿನ ಸುಳಿ ಬಾಡಿ ಒಣಗುತ್ತದೆಬೆಳೆಯು ತೆನೆ ಬಿಡುವ ಅಥವಾ ತೆನೆಗಳು ಹಾಲು ತುಂಬುವ ಹಂತದಲ್ಲಿದ್ದರೆ, ಮರಿಹುಳುಗಳು ತೆನೆಯ ಬುಡವನ್ನು ಕತ್ತರಿಸುವುದರಿಂದ ಒಣಗಿ ಹೋಗುತ್ತವೆಇದನ್ನು ಬಿಳಿ ತೆನೆ ಅಥವಾ ಬೆಪ್ಪು ಒಡೆ ಎನ್ಮ್ನತ್ತಾರೆಅಂತಹ ಸುಳಿಗಳನ್ನು/ತೆನೆಗಳು ಕೈಯಿಂದ ಎಳೆದರೆ ಸುಲಭವಾಗಿ ಬರುತ್ತವೆ.

ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ 0ತದಿ0 ಕಾಳು ಕಟ್ಟುವ 0ತದವರಗೆ ಬರುವ ಕೀಟಗಳು

ಗರಿಸುತ್ತುವ ಹುಳು / ಗರಿ ಮಡುಚುವ ಹುಳು:

                ಮುಂಗಾರು ಮತ್ತು ಬೇಸಿಗೆ ಬೆಳೆಗಳಲ್ಲಿ ಕಾಲದ ಬಾಧೆ ಕಾಣಿಸಿಕೊಳ್ಳುತ್ತದೆ. ನಾಟಿ ಮಾಡಿದ ಪೈರಿನಿಂದ ಪ್ರಾರಂಭಿಸಿ ಬೆಳೆ ಕೊಯ್ಯುಲಿನವರೆಗೂ ಕೀಟವು ಕಂಡುಬರುತ್ತದೆ. ಪ್ರಾರಂಭದಲ್ಲಿ ಎಳೆಯ ಮರಿಗಳು ಎಲೆಯ ನರಗಳ ಹಸಿರು ಭಾಗವನ್ನು ಕೆರೆದು ತಿಂದು ಬೆಳೆಯುತ್ತವೆ. ನಂತರ ಎರಡು ಅಥವಾ ಮೂರು ಎಲೆಗಳ ಅಂಚುಗಳನ್ನು ರೇಷ್ಮೇ ದಾರದಿಂದ ಅಂಟಿಸಿ, ಗೂಡಿನ ಒಳಸೇರಿ ಕೆರೆದು ತಿನ್ನುತ್ತದೆ. ಪೈರಿಗೆ ಪೈರಿನ ಗರಿಗಳನ್ನು ಕೆರೆದು ತಿಂದ ಮೇಲೆ ಮತ್ತೊಂದು ಹೊಸ ಹುಳು ವಲಸೆ ಹೋಗುತ್ತದೆ. ಹುಳುಗಳು ತಿಂದ ಭಾಗವು ಮೊದಲು ಬಿಳಿಯಾಗಿ ನಂತರ ಒಣಗಿ ಕಂದು ಬಣ್ಣಕ್ಕೆ ತಿರುಗುತ್ತದೆ.

 ಕೊಳವೆ ಹುಳು

                ಕೀಟವು ಹೆಚ್ಚು ಮಳೆ ಬೀಳುವ ಮತ್ತು ತಡವಾಗಿ ನಾಟಿ ಮಾಡಿದ ಜೌಗು ಪ್ರದೇಶಗಳಲ್ಲಿ ಕಂಡುಬರುತ್ತದೆಪತಂಗವು ಹಾಲಿನಚಿತೆ ಬಿಳುಪು, ರೆಕ್ಕೆಗಳ ಮೇಲೆ ಸಣ್ಣ ಸಣ್ಣ ಕಂದು ಮಚ್ಚೆಗಳಿರುತ್ತವೆ. ನಾಟಿ ಮಾಡಿದ 10-15 ದಿನಗಳ ನಂತರ ಮರಿಹುಳುಗಳು ಎಲೆಗಳ ತುದಿ ಭಾಗವನ್ನು ಕತ್ತರಿಸಿ ಕೊಳವೆಗಳನ್ನು  ಮಾಡಿಕೊಳ್ಳ್ಳುತ್ತವೆಮರಿಹುಳುಗಳು ಕೊಳವೆಯಿಂದ ತಲೆಯನ್ನು ಚಾಚಿ ಎಲೆಗಳ ಮೇಲ್ಭಾಗದ ಹಸಿರನ್ನು ಕೆರೆದು ತಿನ್ನುವುದರಿಂದ ಎಲೆಗಳು ಬಿಳಿಯ ಹಂದರದಂತೆ ಅಥವಾ ಏಣಿಯಂತೆ ಕಾಣುತ್ತವೆ. ಕೊಳವೆಗಳು ನೀರಿನ ಮೇಲೆ ತೇಲಾಡುತ್ತಿರುವುದು ಸರ್ವೆಸಾಮಾನ್ಯಇವು ಗಾಳಿ ಮತ್ತು ನೀರಿನ ಸಹಾಯದಿಂದ ಇತರ ಗದ್ದೆಗಳಿಗೆ ಹರಡುತ್ತವೆ.

ಕಂದು ಜಿಗಿಹುಳು

ಕೀಟವು ಭತ್ತದ ಬೆಳೆ ಹಾನಿ ಮಾಡುವಲ್ಲಿ ಮೊದಲನೇ ಸ್ಥಾನದಲ್ಲಿದೆ. 1975 ರಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಕಾಣಿಸಿಕೊಂಡ ಈರೀತಿ ಇಂದು ಕರ್ನಾಟಕದ ಎಲ್ಲಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಂಡುಬರುತ್ತದೆ.   ಪ್ರೌಢಹುಳು ಮತ್ತು ಅಪ್ಸರೆಗಳು ಗಿಡದ ಬುಡದಲ್ಲಿದ್ದು ರಸ ಹೀರುತ್ತವೆನಾಟಿ ಮಾಡಿದ ಒಂದು ತಿಂಗಳಿಂದ ಹಾವಳಿ ಆರಂಭ. ಬೆಳೆಯು ಎಳೆಯದಿರುವಾಗ ಅಲ್ಪಸಂಖ್ಯೆಯಲ್ಲಿ ಕಾಣಿಸಿಕೊಂಡು ಬೆಳೆ ಬೆಳೆದಂತೆ ಕೀಟಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರತಿ ಗಿಡದ ಬುಡದಲ್ಲಿ 500-600 ಹುಳುಗಳು ಕಂಡು ಬರುತ್ತವೆ. ಸೆಪ್ಟೆಂಬರ್ನಿಂದ ನವೆಂಬರ್ತನಕ ಇವುಗಳ ಸಂಖ್ಯೆ ಹೆಚ್ಚಾಗುವುದು. ಆರ್ದ್ರತೆ ಹೆಚ್ಚಿರುವ ವಾತಾವರಣ ಮತ್ತು 25-32 ಡಿಗ್ರಿ ಉಷ್ಣತಾಮಾನವು ಇವುಗಳ ಸಂತಾನಾಭಿವೃದ್ಧಿಗೆ ಪೂರಕವಾಗಿರುತ್ತದೆ. ಬೇಸಿಗೆಯಲ್ಲಿ ಇವುಗಳ ಸಂಖ್ಯೆ ತುಂಬಾ ಕಡಿಮೆ ಇರುವುದಲ್ಲದೆ ಅಕಸ್ಮಾತ್ ವೃದ್ಧಿ ಆದರೆ ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಮಾತ್ರ ಆಗುತ್ತದೆ.

ಭತ್ತವನ್ನೇ ಎರಡು ಮೂರು ಬೆಳೆಯಾಗಿ ಬೆಳೆಯುವುದು, ಕಂದು ಜಿಗಿಹುಳುಗಳಿಗೆ ಹೆಚ್ಚು ತುತ್ತಾಗುವ ಕೆಲವು ಭತ್ತದ ತಳಿಗಳನ್ನು ಬೆಳೆಯುವುದು, ಶಿಫಾರಸ್ಸಿಗಿಂತ ಮಿತಿಮೀರಿ ಸಾರಜನಕ ಗೊಬ್ಬರವನ್ನು ಬೆಳೆಗೆ ಕೊಡುವುದು, ವಿವೇಚನೆ ಇಲ್ಲದೆ ಕೀಟನಾಶಕಗಳ ಬಳಕೆ ಮತ್ತು ಬೆಳೆಗೆ ಹೆಚ್ಚು ನೀರು ಕೊಡುವುದು ಇವೇ ಮುಂತಾದವುಗಳಿಂದ ಕಂದು ಜಿಗಿ ಹುಳುಗಳು ಹೆಚ್ಚು ವೃದ್ಧಿಯಾಗಲು ಪ್ರಮುಖ ಕಾರಣಗಳು.

ಕೀಟಗಳು ಭತ್ತದ ಬುಡಭಾಗದಲ್ಲಿ ಕುಳಿತು ಕಾಂಡದಿಂದ ರಸಹೀರುವುದರಿಂದಾಗಿ ಮೊದಲಿಗೆ ಗರಿಗಳ ಅಂಚು ಹಳದಿಬಣ್ಣಕ್ಕೆ ತಿರುಗಿ, ಕ್ರಮೇಣ ಅಲ್ಲಲ್ಲಿ0iÉುೀ ವೃತ್ತಾಕಾರದಲ್ಲಿ ಬೆಳೆ ಸುಟ್ಟಂತಾಗುತ್ತದೆಇದನ್ನುಹಾಪರ್ ಬರ್ನ್ ಅಥವಾಜಿಗಿಸುಡು ಎಂದು ಕರೆಯುತ್ತಾರೆ ಹಾಪರ್ ಬರ್ನ್ನಿಂದಾಗಿ ಭತ್ತದ ತೆನೆಗಳಲ್ಲಿನ ಹಾಲು ನಾಶವಾಗುತ್ತದೆಕಾಳುಗಳು ಜಳ್ಳಾಗುವುದೇ ಅಲ್ಲದೆ ಹುಲ್ಲು ಸಹ ಕೊಳೆತುಹೋಗುತ್ತದೆಹುಳುವಿನ ಸಂಖ್ಯೆ ಹೆಚ್ಚಾದಾಗ ಭತ್ತದ ಬುಡಭಾಗದಲ್ಲಿ ಕಪ್ಪು ಬೂಷ್ಟು ಕಟ್ಟುತ್ತದೆಕಂದು ಜಿಗಿಹುಳುಗಳು ರಸಹೀರಿ ಬೆಳೆಯನ್ನು ಹಾಳು ಮಾಡುವುದೇ ಅಲ್ಲದೆ ಕೆಲವು ಬಗೆಯ ನಂಜು ರೋಗಗಳನ್ನು ಸಹ ಹರಡುತ್ತವೆ. ಸದ್ಯಕ್ಕೆ ಅಂತಹ ನಂಜುರೋಗಗಳ ಬಾಧೆ ನಮ್ಮ ರಾಜ್ಯದಲ್ಲಿ ಎಲ್ಲೂ ಕಂಡುಬಂದಿಲ್ಲ.

ಕಣೆನೊಣ

 ತೀರ ಪ್ರದೇಶದಲ್ಲಿ ಬೆಳೆಯುವ ಮುಂಗಾರಿನ ಬೆಳೆಗೆ ಕಾಟ ಹೆಚ್ಚುಇತ್ತೀಚಿನ ದಿನಗಳಲ್ಲಿ ತಡವಾಗಿ ನಾಟಿ ಮಾಡಿ ಮೊಡ ಕವಿದ ವಾತಾವರಣ ಮತ್ತು ತುಂತುರು ಮಳೆ ಇದ್ದಲ್ಲಿ ಕಣೆ ನೊಣದ ಬಾಧೆ ಗಣನೀಯವಾಗಿ ಕಂಡುಬರುತ್ತಿದೆ

ನಾಟಿ ಮಾಡಿದ 10-15 ದಿನಗಳ ನಂತರ ಹಾನಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಮಾಗಟ್ ಕಾಂಡ ಮತ್ತು ಗರಿಕವಚದ ನಡುವೆ ಹರಿದು ಬುಡಭಾಗವನ್ನು ಸೇರಿ, ಬೆಳೆಯುವ ಸುಳಿಯನ್ನು ಉಜ್ಜಿ ತಿನ್ನುವುದರಿಂದ ಪೈರಿನ ಸುಳಿ ಈರುಳ್ಳಿ ಎಲೆ ಆಕಾರದ ಕೊಳವೆಯಾಗಿ ಮಾರ್ಪಾಡಾಗುತ್ತದೆ. ಅಂತಹ ಪೈರಿನಿಂದ ತೆನೆ ಬರುವುದಿಲ್ಲ. ಇದಕ್ಕೆ ಕಣೆ ಅಥವಾ ಆನೆಕೊಂಬು ಎನ್ನುತ್ತಾರೆ.

ಮುಳ್ಳುಚಿಪ್ಪಿನ ದುಂಬಿ 

ಕೀಟದ ಹಾನಿಯು ಸಸಿಮಡಿಯಲ್ಲಿಯೇ ಶುರುವಾಗಿ ತೆಂಡೆಯೊಡೆಯುವವರೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುತ್ತದೆ. ಪ್ರೌಢಕೀಟ ಕಪ್ಪು ಮೈಮೇಲೆಲ್ಲಾ ಮುಳ್ಳಿನಾಕಾರದುಂಬಿಗಳು ಗರಿಗಳ ಪತ್ರಹರಿತ್ತನ್ನು ಕೆರೆದು ತಿನ್ನುವುದರಿಂದ ಹಾನಿಗೊಳಗಾದ ಗರಿಗಳಲ್ಲಿ ಮೊದಲು ಅಗಲವಾದ ಸಮನಾಂತರ ಗೆರೆಗಳು ಕಾಣಿಸಿಕೊಂಡು ತದನಂತರ ಗರಿಗಳು ಬೆಳ್ಳಗಾಗಿ ಒಣಗಿ ಹೋದಂತೆ ಕಾಣುತ್ತವೆ. ಮರಿಹುಳುಗಳು ಸುರಂಗ ಮಾಡುವುದರಿಂದ ಗರಿಗಳಲ್ಲಿ ಕಂದು ಮಚ್ಚೆಗಳು ಕಾಣಿಸುತ್ತವೆ

ಹಸಿರು ಕೊಂಬಿನ ಹುಳು

                ಹುಳು ಭತ್ತದ ಮೇಲೆ ಬರುವ ಚಿಟ್ಟೆ ಕೀಟವಾಗಿದೆ. ಇವುಗಳ ಮರಿ ಹುಳುಗಳು ಹಸಿರು ಬಣ್ಣವನ್ನು ಹೊಂದಿದ್ದು ತಲೆಯ ಮೇಲೆ ಎರಡು ಕೊಂಬುಗಳಿರುವುದರಿಂದ ಇವುಗಳಿಗೆ ಹಸಿರು ಕೊಂಬಿನ ಹುಳವೆ0ದು ಕರೆಯುತ್ತಾರೆ. ಮರಿಹುಳು ಎಲೆಗಳನ್ನು ಕತ್ತರಿಸಿ ತಿನ್ನುತ್ತವೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇವುಗಳ ಬಾಧೆ ಸೈನಿಕ ಹುಳುವಿನ ಬಾಧೆಯನ್ನು ಹೋಲುತ್ತದೆ. ಕೀಟ ಎಲೆಯ ಎರಡು ಕಡೆಗಳಲ್ಲಿ ಅಂಗಾಂಶವನ್ನು ಮತ್ತು ಎಲೆಯ ನರಗಳನ್ನು ತಿನ್ನುತ್ತದೆ. ಇವುಗಳ ಸಂಖ್ಯೆ ತೀರ ಹೆಚ್ಚಾದಾಗ ಅಂದರೆ ಸುಮಾರು 50 ರಷ್ಟು ಗಿಡಗಳ ಮೇಲೆ ಕಂಡು ಬಂದರೆ ಮಾತ್ರ ಕೀಟ ನಾಶಕವನ್ನು ಬಳಸಬೇಕು. ಅದಲ್ಲದೆ ಅಲ್ಪ ಸ್ವಲ್ಪವಿದ್ದರೆ ಕೀಟದಿಂದ ಯಾವುದೇ ಹಾನಿ ಇರುವುದಿಲ್ಲ.

ಜಿಗಿಯುವ ಚಿಟ್ಟೆ

                ಇವುಗಳು ಮಳೆಯಾಶ್ರಿತ ಚಿತ್ರದ ಭತ್ತದ ಪರಿಸರದಲ್ಲಿ ಬಹಲ ಹೆಚ್ಚಾಗಿ ಕಂಡುಬರುವುದು. ಪ್ರಬುದ್ಧ ಮತ್ತು ಮರಿಹುಳುಗಳು ಎಲೆಯ ಮೇಲಿದ್ದುಕೊಂಡು ಎಲೆಯ ಅಂಗಾಂಶವನ್ನು ಮತ್ತು ನರಗಳನ್ನು ತಿನ್ನುತ್ತವೆ. ಕೀಟಬಾಧೆಯ ಲಕ್ಷಣಗಳು ಸುಮಾರು ಹಸಿರು ಕೊಂಬಿನ ಹುಳಬಾಧೆಯನ್ನು ಹೋಲುತ್ತದೆ. ಇವುಗಳು ಎಲೆಯ ತುದಿಯನ್ನು ಬಾಗಿಸಿ ಅಥವಾ ಎಲೆಯ ಎರಡು ಬದಿಗಳನ್ನು ಸೇರಿಸಿಕೊಂಡು ಸಣ್ಣಕೋಶವನ್ನು ಮಾಡಿಕೊಳ್ಳೂತ್ತವೆ. ವಾತಾವರಣದಲ್ಲಿನ ತೇವಾಂಶ ಮತ್ತು ಕಡಿಮೆ ತಾಪಮಾನ ಇವುಗಳ ಅಭಿವೃದ್ಧಿಗೆ ಪೂರಕವಾದ ಅಂಶಗಳು.

  ನೀಲಿ ದುಂಬಿ

                ಕೀಟವು ಮುಖ್ಯವಾಗಿ ಮಲೆನಾಡಿನಲ್ಲಿ ಮುಂಗಾರಿನಲ್ಲಿ ಹಾಗೂ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರಿ ಭತ್ತದಲ್ಲಿ ಕಂಡು ಬರುತ್ತದೆ. ದುಂಬಿಗಳು ಬಣ್ಣ ನೀಲಿ ಇರುವುದರಿಂದ ಅದೇ ಹೆಸರನ್ನು ಅವುಗಳಿಗೆ ಇಡಲಾಗಿದೆ. ಪ್ರಬುದ್ಧ ಮತ್ತು ಮರಿಹುಳಗಳು ಎಲೆಯ ಮೇಲಿದ್ದುಕೊಂಡು ಪತ್ರಹರಿತ್ತನ್ನು ಮೇಯಿತ್ತವೆ ಇವುಗಳ ಬಾಧೆಗೊಳಗಾದ ಎಲೆಗಳ ಮೇಲೆ ಉದ್ದನೆಯ ಸಮಾನಾಂತರ ರೇಖೆಗಳು ಕಂಡುಬರುವುದು. ರೀತಿ ಬಾಧೆಗೊಳಗಾದ ಎಲೆಗಳು ಮೇಲಕ್ಕೆ ಮುದುರಿಕೊಳ್ಳೂವುದನ್ನು ಕಾಣಬಹುದು. ಮಳೆಯಾಶ್ರಿತ ಎತ್ತರದ ಭತ್ತದ ಗದ್ದೆಗಳು, ಅತಿವೃಷ್ಠಿ, ಕೀಟನಾಶಕಗಳ ದುರ್ಬಳಕೆ, ಮಿತ್ರಕೀಟಗಳು ಕಡಿಮೆ ಇರುವುದು ಮತ್ತು ಬೆಳವಣಿಗೆ ಹಚಿತದಲ್ಲಿರುವ ಬೆಳೆ ಕೀಟಗಳ ಬೆಳವಣಿಗೆಗೆ ಪೂರಕವಾದ ಅಂಶಗಳು.

ತೆನೆ ತಿಗಣೆ

 ರಾಜ್ಯದ ತೀರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಬೆಳೆಗೆ ಹಾನಿ ಹೆಚ್ಚುಇತ್ತೀಚಿನ ದಿನಗಳಲ್ಲಿ ಮೈದಾನ ಪ್ರದೇಶದ ಕೆಲವು ಭಾಗಗಳಲ್ಲಿಯೂ ಇವುಗಳ ಕಾಟ ಕಂಡುಬರುತ್ತಿದೆ.ಪ್ರೌಢ ಮತ್ತು ಅಪ್ಸರೆ ಕೀಟಗಳು ತೆನೆ ಹಾಲು ತುಂಬುವ ಕಾಲದಲ್ಲಿ ರಸ ಹೀರುತ್ತವೆಅಂತಹ ತೆನೆಗಳಲ್ಲಿ ಕಾಳು ಜೊಳ್ಳಾಗುತ್ತವೆ.

 

ಸಮಗ್ರ ಹತೋಟಿ ಕ್ರಮಗಳು

1. ನಾಟಿ ಮಾಡುವಾಗ ಸಸಿಗಳ ಎಲೆಯ ತುದಿಯನ್ನು ಚಿವುಟಿ ನಾಟಿಮಾಡಬೇಕು. ಇದರಿಂದ ಸಸಿಗಳ ಎಲೆಯ ತುದಿಯಲ್ಲಿಟ್ಟಿರುವ ಹುಳದ ತತ್ತಿಗಳನ್ನು ನಾಶ ಮಾಡಿದಂತಾಗುತ್ತದೆ. ಕೀಟವು ಪ್ರತಿ ವರ್ಷವೂ ಕಂಡುಬರುವ ಪ್ರದೇಶದಲ್ಲಿ ಬೆಳೆ ಕಟಾವಾದ ನಂತರ ಉಳಿದ ಬೆಳೆಯ ಅವಶೇಷವನ್ನು ಬೆಂಕಿಹಚ್ಚಿ ಸುಡಬೇಕು. ಮಾಗಿ ಉಳುಮೆ ಮಾಡುವುದರಿಂದ ಕೋಶಾವಸ್ತೆಯಲ್ಲಿರುವ ಕೀಟಗಳು ನಾಶಹೊಂದುವವು

2. ಥ್ರಿಪ್ಸ್ ಮತ್ತು  ಗರಿಜಿಗಿ ಹುಳ ಬೆಳೆಯ ಮೇಲೆ ಕಾಣಿಸಿಕೊಂಡ ತಕ್ಷಣ ಪ್ರತಿ ಲೀಟರ್ ನೀರಿಗೆ 1.0 ಮಿ.ಲೀ. ಬೇವಿನ ಎಣ್ಣೆಯನ್ನು ಅಥವಾ ಕೀಟದ ಹಾವಳಿ ತೀರ ಹೆಚ್ಚಾದಾಗ 1.5 ಮಿ.ಲೀ. ಮೊನೊಕ್ರೊಟೊಫಾಸ್ ಆಥವಾ 2.0 ಮಿ.ಲೀ.ಕ್ಲೋರೋಪೈರಿಫಾಸನ್ನು  ಒಂದು ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. ಒಂದು  ವೇಳೆ ಸಿಂಪಡಿಸಲು ಸಾಧ್ಯವಾಗದಿದ್ದರೆ, ಸಸಿಗಳ ನಾಟಿಗೆ ಇನ್ನೂ 10-12 ದಿನಗಳಿದ್ದರೆ ಪ್ರತೀ ಒಂದು ಗುಂಟೆ ಸಸಿ ಮಡಿಗೆ 300 ಗ್ರಾಂ. ಶೇ. 3 ಕಾರ್ಬೋಪುರಾನ್ ಅಥವಾ  250 ಗ್ರಾಂ. ಶೇ. 10 ಫೆÇೀರೇಟ್ ಹರಳು ರೂಪದ ಕೀಟನಾಶಕವನ್ನು ಪೈರಿಗೆ ಎರಚುವುಧು.   ಹರಳು ರೂಪದ ಕೀಟನಾಶಕಗಳನ್ನು ಕೆಸರು ಸಸಿ ಮಡಿಗೆ ಹಾಕುವಾಗ ಸ್ವಲ್ಪ  ಪ್ರಮಾಣದಲ್ಲಿ ನೀರಿದ್ದರೆ ಸಾಕು.  24 ರಿಂದ 36 ಗಂಟೆಗಳ ಕಾಲ ನೀರು ಸಸಿ ಮಡಿಗೆ ಬರುವುದು ಅಥವಾ ಹೊರ ಹೋಗದಂತೆ ಎಚ್ಚರಿಕೆ ವಹಿಸಿ.

 3. ಸಸಿಗಳನ್ನು ನಾಟಿ ಮಾಡುವ ಪೂರ್ವದಲ್ಲಿ ಕ್ಲೋರ್ಪೈರಿಫಾಸ್ 20 .ಸಿ. 2 ಮಿ.ಲೀ. ಪ್ರತಿ ಲೀಟರ್ ದ್ರಾವಣದಲ್ಲಿ ಒಂದು ರಾತ್ರಿ ಇಟ್ಟು ನಂತರ ನಾಟಿ ಮಾಡಿದಲ್ಲಿ ಪ್ರಾರಂಭಿಕ ಹಂತದ ಕೀಟಗಳನ್ನು ಹತೋಟಿ ಮಾಡಬಹುದು.

4.ಬದುಗಳ ಹಾಗೂ ನೀರು ಕಾಲುವೆಯ ಮೇಲೆ ಬೆಳೆಯುತ್ತಿರುವ ಹುಲ್ಲುಗಳನ್ನು ಇತರೇ ಸಸ್ಯಗಳನ್ನು ನಾಶ ಮಾಡಬೇಕುಇದರಿಂದ ಹುಲ್ಲುಗಳ ಮೇಲೆ ವೃದ್ಧಿಗೊಳ್ಳುವ ನುಶಿ, ಮುಳ್ಳು ಚಿಪ್ಪಿನ ದುಂಬಿ ಹಾಗೂ ಇತರ ಕೀಟಗಳನ್ನು ಕಡಿಮೆ ಮಾಡಬಹುದು

5. ಕಾಂಡ ಕೊರೆಯುವ ಹುಳದ ಹತೋಟಿಗಾಗಿ ಹೆಕ್ಟೇರಿಗೆ 20 ಲಿಂಗಾಕರ್ಷಕಗಳ ಬಲೆಗಳನ್ನು ನಾಟಿ ಮಾಡಿದ 20 ದಿನಗಳವರೆಗೆ ಉಪಯೋಗಿಸಿ ಪತಂಗಗಳನ್ನು ಆಕರ್ಷಿಸಿ ಕೊಲ್ಲುವುದು ಪರಿಣಾಮಕಾರಿ0iÉುಂದು ತಿಳಿದು ಬಂದಿದೆ

6. ಭತ್ತದ ಕಾಂಡ ಕೊರೆಯುವ ಹುಳು ಮತ್ತು ಗರಿ ಮುಡಿಸುವ ಹುಳುಗಳ ನಿಯಂತ್ರಣಕ್ಕೆ  0.3 ಮಿ.ಲೀ. 0ಡಾಕ್ಸಕಾರ್ಬ್ 14.5 ಎಸ್.ಸಿ. ಅಥವಾ 0.3 ಗ್ರಾಂ ¥sóÀÅ್ಲಬೆನ್ಡಮೈಡ್ 20 ಡಬ್ಲುಡಿಜಿ ಅಥವಾ 0.1 ಮಿ.ಲೀ. ¥sóÀÅ್ಲಬೆನ್ಡಮೈಡ್ 48 ಎಸ್.ಸಿ. ಅಥವಾ 2.0 ಮಿ.ಲೀ. ಕ್ಲೋರೋಪ್ಶೆರಿಪಾಸ್ ಅಥವಾ 2.0 ಮಿ.ಲೀ. ಕ್ವಿನಾಲಪಾಸ್ ಅಥವಾ 2.0 ಮೀ. ಪೆÇೀಸಲಾನ್ ಅಥವಾ 1.3 ಮಿ.ಲೀ ಮೊನೋಕ್ರೋಟೋಫಾಸ್ ಅಥವಾ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಹರಳು ರೂಪದ ಕೀಟನಾಶಕಗಳಾದಲ್ಲಿ, ಪಿಫೆರ್Çನಿಲ್ ಹರಳುಗಳನ್ನು ಪ್ರತಿ ಹೆಕ್ಟೇರಿಗೆ 1.5 ಕಿ.ಗ್ರಾಂ. ನಂತೆ ಅಥವಾ ಶೇ.3 ಕಾರ್ಬೊಫ್ಯೂರಾನ್ ಹರಳನ್ನು ಹೆಕ್ಟೇರಿಗೆ 19 ಕಿ.ಗ್ರಾಂ. ನಂತೆ ಅಥವಾ ಶೇ.4 ಕಾರ್ಟಾಫ್ ಹೈಡ್ರೋಕ್ಲೋರೈಡ್ ಹರಳುಗಳನ್ನು ಒಂದು ಹೆಕ್ಟೇರಿಗೆ 25 ಕಿ.ಗ್ರಾಂ. ನಷ್ಟು ಬಳಸಬೇಕು

7. ಗದ್ದೆಯಲ್ಲಿ ನೀರು ನಿಲ್ಲಿಸಿ ತೆಳುವಾದ ಸೀಮೆ ಎಣ್ಣೆಯ ಪೆÇರೆಯನ್ನು ಮಾಡಿ, ಹಗ್ಗವನ್ನು ತೆಂಡೆಗಳಿಗೆ ತಾಕಿಸಿ ಎಳೆಯುವದರಿಂದ ತಂಡೆಗಳ ಕೆಳಭಾಗದಲ್ಲಿ ಜೊತ್ತು ಬಿದ್ದಿರುವ ಕೊಳವೆ ಹುಳುಗಳನ್ನು ನೀರಿಗೆ ಬೀಳಿಸಿ ನಾಶಮಾಡಬಹುದು ಹಾಗೂ  ಪೈರನ್ನು ಅಲ್ಲಾಡಿಸಿದರೆ ಮುಳ್ಳುಚಿಪ್ಪಿನ ದುಂಬಿಗಳು ನೀರಿಗೆ ಬಿದ್ದು ನಾಶಹೊಂದುತ್ತವೆ.

 

ಕಂದು ಜಿಗಿಹುಳದ ಹತೋಟಿಗಾಗಿ

ನೀರು ನಿರ್ವಹಣೆ: ಕಂದು ಜಿಗಿಹುಳುಗಳ ಕಾಟವಿರುವ ಪ್ರದೇಶಗಳಲ್ಲಿ ಭತ್ತವನ್ನು ನಾಟಿಮಾಡಿದ 60 ದಿನಗಳ ನಂತರ ಬೆಳೆಗೆ ಯಾವಾಗಲು ನೀರು ಹರಿಸುವ ಬದಲು, ಭೂಮಿಯನ್ನು ಆಗಿಂದಾಗ್ಗೆ ಒಣಗಿಸಿ ನೀರು ಕೊಡುವುದು ಉತ್ತಮಇದರಿಂದ ಕಂದು ಜಿಗಿಹುಳುಗಳು ವೃದ್ಧಿಯಾಗುವುದು ಕುಂಟಿತವಾಗುತ್ತದೆ

ಕಂದು ಜಿಗಿಹುಳುಗಳ ಸ್ವಾಭಾವಿಕ ಶತ್ರುಗಳಿಗೆ ಉತ್ತೇಜನ: ಕಂದು ಜಿಗಿಹುಳುಗಳಿಗೆ ಭತ್ತದ ಪರಿಸರದಲ್ಲಿ ಅನೇಕ ಬಗೆಯ ಸ್ವಾಭಾವಿಕ ಶತ್ರುಗಳಾದ  ಹಸಿರು ತಿಗಣೆ, ಗುಲಗಂಜಿಹುಳು, ಮೀರಿಡ್ ತಿಗಣೆ, ಮೊಟ್ಟೆಗಳಲ್ಲಿನ ವಿವಿಧ ಬಗೆಯ ಪರತಂತ್ರ ಜೀವಿಗಳು, ಜಂತುಹುಳುಗಳು ಮತ್ತು ವಿವಿಧ ಬಗೆಯ ಜೇಡಗಳು 0ಡುಬರುತ್ತವೆ. ಆದ್ದರಿ0, ವಿವೇಚನೆ ಇಲ್ಲದೆ ಕೀಟನಾಶಕಗಳನ್ನು ಬಳಸಿ ಸ್ವಾಭಾವಿಕ ಶತ್ರುಗಳ ನಾಶಮಾಡದೆ ಅವುಗಳ ವೃದ್ಧಿಗೆ ಉತ್ತೇಜನ ಕೊಡುವುದು ಉತ್ತಮ.

 

ಕೀಟನಾಶಕಗಳ ಬಳಕೆ: ಭತ್ತವನ್ನು ನಾಟಿ ಮಾಡಿದ 60-70 ದಿನಗಳ ನಂತರ ವಾರಕೊಮ್ಮೆಯಾದರು ಭತ್ತದ ಗದ್ದೆಗಳಲ್ಲಿ ಕೆಲವಾರು ಕಡೆ ತೆಂಡೆಯ ಬುಡಭಾಗವನ್ನು ವೀಕ್ಷೀಸಿ ಕಂದು ಜಿಗಿಹುಳುಗಳುಗಳಿರುವುದನ್ನು ಗುರುತಿಸಬೇಕುಒಂದು ವೇಳೆ ಪ್ರತೀ ತೆಂಡೆಗೆ 5-10 ಕಂದು ಜಿಗಿಹುಳುಗಳಿದ್ದು, ಮೊದಲೆ ತಿಳಿಸಿದ ಸ್ವಾಭಾವಿಕ ಶತ್ರುಗಳ ಚಟುವಟಿಕೆ ಹೆಚ್ಚಾಗಿದ್ದರೆ, ಕೀಟನಾಶಕಗಳನ್ನು ಉಪಯೋಗಿಸುವುದು ಬೇಡಒಂದು ವೇಳೆ ಪ್ರತಿ ಭತ್ತದ ತೆಂಡೆಯಲ್ಲಿ ಕಂದುಜಿಗಿ ಹುಳುಗಳಿದ್ದು ಸ್ವಾಭಾವಿಕ ಶತ್ರುಗಳ ಸಂಖ್ಯೆ ಬಹಳ ಕಡಿಮೆ ಇದ್ದರೆ ಕೆಳಗೆ ಸೂಚಿಸಿದ ಕೀಟನಾಶಕಗಳನ್ನು ಉಪಯೋಗಿಸಿ ಕಂದು ಜಿಗಿಹುಳುಗಳನ್ನು ಹತೋಟಿ ಮಾಡಬಹುದು.

ಸಿಂಪರಣಾ ರೂಪದ ಕೀಟನಾಶಕಗಳ ಬಳಕೆ: 25.20 ಬ್ಯೂಪೆÇ್ರೀಪೆಜಿûನ್25 ಎಸ್.ಸಿ. ಅಥವಾ ಥಯೋಮೆಥಾಕ್ಸಮ್  3.60 ಗ್ರಾ0 ಅಥವಾ ಇಮಿಡಾಕ್ಲೋಪ್ರಿಡ್ 5.40 ಮಿ.ಲೀ. ಅಥವಾ 23 ಮಿ.ಲೀ. ಮೊನೊಕ್ರೋಟೋಫಾಸ್ ಅಥವಾ 36 ಮಿ.ಲೀ. ಕ್ಲೋರೋಪೈರಿಫಾಸ್ ಅಥವಾ 36 ಗ್ರಾಂ. ಕಾರ್ಬರಿಲ್ ಪುಡಿಯನ್ನು 18 ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕುಸಿಂಪರಣಾ ದ್ರಾವಣ ಭತ್ತದ ಬುಡಭಾಗಕ್ಕೆ ಬೀಳುವಂತೆ ಸಿಂಪಡಿಸಬೇಕುಎಕರೆಗೆ 300-350 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.

ಹರಳುರೂಪದ ಕೀಟನಾಶಕಗಳ ಬಳಕೆ: ಹರಳು ರೂಪದ ಕೀಟನಾಶಕಗಳನ್ನು ಬಳಸಿದ್ದೇ ಆದರೆ ಎಕರೆಗೆ 8 ಕೆ.ಜಿ. ಕಾರ್ಬೋಪುರಾನ್ 3 ಜಿ. ಉತ್ತಮ ಕೀಟನಾಶಕ ಉಪಯೋಗಿಸುವಾಗ ಗದ್ದೆಗಳಲ್ಲಿ ಚುಮಕು ನೀರಿದ್ದರೆ ಸಾಕುನೀರು ಒಂದು ಗದ್ದೆಯಿಂದ ಬೇರೊಂದು ಗದ್ದೆಗೆ ಕನಿಷ್ಟ 36 ಗಂಟೆಗಳ ಕಾಲ ಹರಿದಾಡಬಾರದು ಮತ್ತು ಕೀಟನಾಶಕ ಉಪಯೋಗಿಸಿದ 20 ದಿನಗಳ ನಂತರ ಕಟಾವು ಮಾಡಬೇಕುಕಾರ್ಬೊಪುರಾನ್ 3 ಜಿ. ಉಪಯೋಗಿಸಿದ್ದಲ್ಲಿ ಕಂದುಜಿಗಿ ಹುಳುಗಳ ಸ್ವಾಭಾವಿಕ ಶತ್ರುಗಳಿಗೆ ಹೆಚ್ಚು ಅಪಾಯಕಾರಿಯಲ್ಲ.

ಬೆಳೆ ಪರಿವರ್ತನೆ: ಭತ್ತವನ್ನೇ 2-3 ಬೆಳೆಯಾಗಿ ಬೆಳೆಯುವುದು ಸೂಕ್ತವಲ್ಲಭತ್ತ-ರಾಗಿ, ಭತ್ತ-ದ್ವಿದಳಧಾನ್ಯ, ಭತ್ತ-ಕಬ್ಬು ಅಥವಾ ಯಾವುದೇ ಬೇರೆ ಬೆಳೆಗಳ ಪರಿವರ್ತನೆ ಅಗತ್ಯಭತ್ತವನ್ನೇ 2 ಬೆಳೆಯಾಗಿ ಬೆಳೆಯಬೇಕೆಂದಿರುವ ರೈತರು ಜಯ, ರಾಶಿ, .ಆರ್.-20 ತಳಿಗಳ ಬದಲು ಕಂದುಜಿಗಿ ನಿರೋಧಕ ಶಕ್ತಿ ಇರುವ ತಳಿಗಳನ್ನು ಬೆಳೆಸುವುದು ಉತ್ತಮ.

ಮಿತವಾಗಿ ಸಾರಜನಕ ಗೊಬ್ಬರಗಳ ಬಳಕೆ: ಮಿತಿಮೀರಿ ಸಾರಜನಕದ ಗೊಬ್ಬರ ಬಳಸುವುದು ಬೇಡಶಿಫಾರಸ್ಸಿನಲ್ಲಿರುವಷ್ಟು ಗೊಬ್ಬರ ಬಳಕೆ ಅಗತ್ಯ ಮತ್ತು ಕಂದು ಜಿಗಿಪೀಡಿತ ಪ್ರದೇಶಗಳಲ್ಲಿ ಭತ್ತವನ್ನು ಅತಿ ಹೊತ್ತಾಗಿ ನಾಟಿ ಮಾಡುವುದು ಬೇಕಿಲ್ಲ.

ಕಂದು ಜಿಗಿಹುಳು ನಿರೋಧಕ ಭತ್ತದ ತಳಿಗಳು: ಅನೇಕ ಭತ್ತದ ತಳಿಗಳು ಕಂದು ಜಿಗಿಹುಳುಗಳ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆಕಂದು ಜಿಗಿಪೀಡಿತ ಪ್ರದೇಶಗಳಲ್ಲಿ ಅಂತಹ ತಳಿಗಳಾದ ..ಟಿ.7575 ಮತ್ತು ..ಟಿ.8116 ಬಳಕೆ ಅಗತ್ಯ ಮತ್ತು ಸಸ್ಯಸಂರಕ್ಷಣೆಯ ಹೊಣೆಯೂ ಸಹ ಕಡಿಮೆ.

ಡಾII 
ಡಿ.ಕೆ.ಸಿದ್ದೇಗೌಡ

 
 

File Courtesy: 
ZARS,RKMP-Mandya
30
Nov

Suggestions to Paddy Farmers in T.Narasipura and Nanjangud taluk of Mysore District.

 ಎಲೆ ಕವಚ ಕೊಳೆ ರೋಗ, ಕುತ್ತಿಗೆ ಬೆಂಕಿ ರೋಗ ಹಾಗೂ ಕಂದು ಜಿಗಿ ಹುಳುಗಳ ಹತೋಟಿ ಕ್ರಮಗಳು

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ನಂಜನಗೂಡು ಹಾಗೂ ಟಿ.ನರಸೀಪುರ ಭಾಗದಲ್ಲಿ ಬೆಳೆದಿರುವ ಭತ್ತದ ಗದ್ದೆಗಳಲ್ಲಿ ಎಲೆಗಳ ಮೇಲೆ ಕಂದು ಮಚ್ಚೆಗಳು ಕಂಡು ಬಂದಿದ್ದು, ಎಲೆಗಳು ಕೆಂಪು ಹಳದಿ ಬಣ್ಣಕ್ಕೆ ತಿರುಗಿದ್ದು, ಒಣಗಿದಂತೆ ಕಾಣುತ್ತಿದೆ.  ಇದು ಕವಚ ಕೊಳೆ ರೋಗದ ಚಿಹ್ನೆಯಾಗಿದೆ.  ಇಂತಹ ಚಿಹ್ನೆ ಕಂಡು ಬಂದಾಗ ಕೆಳಗೆ ಸೂಚಿಸಿರುವ ನಿರ್ವಹಣಾ ಕ್ರಮಗಳನ್ನು ರೈತರು ಕೈಗೊಳ್ಳಬೇಕಾಗುತ್ತದೆ.

ಬೆಳೆಗೆ  ಪೆÇ್ರೀಪಿಕೋನಾಝೋಲ್ ಅಥವಾ ಹೆಕ್ಸಾಕೋನಾಝೋಲಾ ಔಷಧಿಯನ್ನು 1 ಲೀ ನೀರಿಗೆ 1 ಮಿ.ಲೀ. ಪ್ರಮಾಣದಲ್ಲಿ ಬೆರೆಸಿ ಗಿಡಗಳು ಸಂಪೂರ್ಣವಾಗಿ ನೆನೆಯುವಂತೆ ಸಿಂಪಡಿಸಬೇಕು. ಎಕರೆಗೆ 150 ರಿಂದ 200 ಲೀ ಸಿಂಪರಣಾ ದ್ರಾವಣ ಬೇಕಾಗುತ್ತದೆ. 
 
ಕುತ್ತಿಗೆ ಬೆಂಕಿ ರೋಗದ ಬಾಧೆಗೆ ಮುನ್ನೆಚ್ಚರಿಕೆಯಾಗಿ ಟ್ರೈಸೈಕ್ಲೋಝೋಲ್ ಔಷಧಿಯನ್ನು 6 ಗ್ರಾಂ ಪ್ರತಿ 10 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.
 

  ಎಲೆ ಕವಚ ಕೊಳೆ ರೋಗ Sheath blight ಇಲ್ಲದ ಕೇವಲ ಎಲೆಗಳ ಬಣ್ಣ ಕೆಂಪು - ಹಳದಿ ಬಣ್ಣಕ್ಕೆ ತಿರುಗಿದ್ದರೆ ಹಾಗೂ ಬೆಳೆಯು ಇನ್ನು ತೆಂಡೆಹೊಡೆಯುವ ಹಂತದಲ್ಲಿದ್ದರೆ ಅಂತಹ ತಾಕುಗಳಿಗೆ, ಕಬ್ಬಿಣ, ಸತು, ಮ್ಯಾಂಗನೀಸ್ ಯುಕ್ತ ಲಘು ಪೆÇೀಷಕಾಂಶಗಳನ್ನು ಸಿಂಪಡಿಸಬೇಕು.





File Courtesy: 
ZARS,RKMP-Mandya
23
Nov

ಅಕ್ಕಿ ಬೆಳೆಯಲ್ಲೂ ಲಾಭ ಅಧಿಕ

 

`ಬತ್ತ ಬೆಳೆದರೆ ಲಾಭವೇ ಇಲ್ಲ` ಎನ್ನುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಮಲೆನಾಡಿನ ಹಲವು ರೈತರು ಕಾಫಿ, ಬಾಳೆ, ಅಡಿಕೆಗಳತ್ತ ವಾಲಿದ್ದಾರೆ. ಬತ್ತದ ಗದ್ದೆಯನ್ನು ಬೇರೆ ಬೆಳೆಗಳು  ಆಕ್ರಮಿಸಿಕೊಂಡಿವೆ. ಕೆಲವರ ಭೂಮಿ ಹಾಳು ಬಿದ್ದರೆ ಕೆಲವರು ಗುತ್ತಿಗೆಗೆ ಕೊಟ್ಟಿದ್ದಾರೆ. ಸ್ವತಃ ಕೃಷಿಕನಾದರೂ ಪೇಟೆಯಿಂದ ಅಕ್ಕಿ ಕೊಳ್ಳುವಂತಾಗಿದೆ. 


ಆದರೆ ವಾಸ್ತವದಲ್ಲಿ, ಬತ್ತದ ಕೃಷಿಯನ್ನು   ವೈಜ್ಞಾನಿಕ ರೀತಿಯಲ್ಲಿ ನಡೆಸಿದರೆ ಖಂಡಿತ ಲಾಭವಿದೆ ಎಂದು ತೋರಿಸಿಕೊಟ್ಟಿದ್ದಾರೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಂಜುಗೂಡನಹಳ್ಳಿ ಗ್ರಾಮದ ರೈತ ಹೆಚ್.ಎಲ್.ನರೇಶ್.
ದನಗಳನ್ನು ಸಾಕಿದ್ದರಿಂದ ಗೊಬ್ಬರ ಕೊಳ್ಳುವ ಖರ್ಚು ಉಳಿತಾಯವಾಗಿದೆ. 

ರಾಸಾಯನಿಕ ಗೊಬ್ಬರ ಕೀಟನಾಶಕಗಳನ್ನು ಬಳಸುವುದಿಲ್ಲ. ಪ್ರತಿ ವರ್ಷ ಸೆಣಬಿನ ಬೀಜವಾಗಿ ಹಾಕಿ 2 ತಿಂಗಳು ಬಿಟ್ಟು ಉಳುಮೆ ಮಾಡುವುದರಿಂದ ಭೂಮಿ ಫಲವತ್ತಾಗಿದೆ. ಅಜೋಲವನ್ನು ಗದ್ದೆ ನಾಟಿ ಮಾಡುವಾಗ ಹಾಕುವುದರಿಂದ ಕಳೆ ನಿಯಂತ್ರಣವಾಗಿದೆ. ಸ್ವತಃ ನಾಟಿ ಯಂತ್ರವನ್ನು ಹೊಂದಿರುವುದರಿಂದ ಕಾರ್ಮಿಕರ ಅವಲಂಬನೆ ಕಡಿಮೆಯಾಗಿದೆ. ಇದರಿಂದ ಸಾಕಷ್ಟು ಉಳಿತಾಯವಾಗಿದೆ. ಯಂತ್ರದಿಂದ ನಾಟಿ ಮಾಡುತ್ತಾರೆ. 20-30 ದಿವಸದಲ್ಲಿ ನಾಟಿ ಕೆಲಸ ಮುಗಿಯುತ್ತದೆ. 

`ಕಂಬೈನ್ಡ್ ಹಾರ್‌ವೆಸ್ಟ್` ಯಂತ್ರವನ್ನು ಉಪಯೋಗಿಸುವುದರಿಂದ ಗದ್ದೆ ಕೊಯ್ಯುವುದು ಮತ್ತು ಒಕ್ಕಲಾಟ ಒಂದೇ ಸಾರಿ ಆಗುತ್ತದೆ. ಇದರಿಂದ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ. ಇವರು ತಮ್ಮ ಎಂಟು ಎಕರೆ ಗದ್ದೆಯಲ್ಲಿ ಹೊಳೆಸಾಲು ಚಿಪ್ಪುಗ (ಪುರಿ ಮಾಡುವ) ಬತ್ತವನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷ ಒಂದು ಎಕರೆಗೆ 20 ಕ್ವಿಂಟಲ್ ಬತ್ತದ ಇಳುವರಿ ಬಂದಿದೆ. ಕ್ವಿಂಟಲ್‌ಗೆ 2,300 ರೂಪಾಯಿಗಳಂತೆ ಮಾರಿ ಪ್ರತಿ ಎಕರೆಗೆ ರೂ 46ಸಾವಿರ ರೂಪಾಯಿ ಲಾಭ ಗಳಿಸಿದ್ದಾರೆ. ಅವರು ಖರ್ಚು ಮಾಡಿರುವುದು ಕೇವಲ ರೂ15 ಸಾವಿರ.

ತಮ್ಮ ಎಂಟು ಎಕರೆ ಗದ್ದೆಯ ಜೊತೆಗೆ ಬೇರೆಯವರ ಗದ್ದೆಯನ್ನು ಗುತ್ತಿಗೆಗೆ ಪಡೆದು ಬತ್ತವನ್ನು ಬೆಳೆಯುತ್ತಿದ್ದಾರೆ. ಪ್ರತಿ ವರ್ಷವು ಮೇ 30ಕ್ಕೆ ಅಗೆ ಹಾಕುವುದು, ಅಗೆ ಹಾಕಿ 15 ರಿಂದ 20 ದಿನಗಳೊಳಗೆ ನಾಟಿ ಮಾಡುವುದು ಮತ್ತು ಇಲಿಗಳನ್ನು ನಿಯಂತ್ರಿಸಲು ಅವು ಓಡಾಡುವ ಜಾಗದಲ್ಲಿ ಎರಡು ಬಿದಿರಿನ ಕಂಬಗಳನ್ನು ನಿಲ್ಲಿಸಿ ಅದರ ಮೇಲೆ ಇನ್ನೊಂದು ಬಿದಿರಿನ ತುಂಡನ್ನು ಅಡ್ಡವಾಗಿ ಇಟ್ಟಿದ್ದಾರೆ. ಅದರಲ್ಲಿ ಗೂಬೆಗಳು ಮತ್ತು ಇತರ ಪಕ್ಷಿಗಳು ರಾತ್ರಿ ವೇಳೆಯಲ್ಲಿ ಕುಳಿತುಕೊಂಡು ಇಲಿಗಳನ್ನು ಹಿಡಿದು ತಿನ್ನುತ್ತವೆ. ಇದರಿಂದ ಇಲಿಗಳು ನಿಯಂತ್ರಣವಾಗಿವೆ. 

ಹೀಗೆ ವ್ಯವಸ್ಥಿತವಾಗಿ ಬತ್ತದ ಕೃಷಿ  ಕೈಗೊಂಡರೆ ಖಂಡಿತ ಲಾಭವಿದೆ. ಗದ್ದೆಯನ್ನು ತೋಟವಾಗಿ ಪರಿವರ್ತನೆ ಮಾಡಿದರೆ ಮತ್ತೊಂದು ದಿನ ಅಕ್ಕಿಗೆ ಚಿನ್ನದ ಬೆಲೆ ಬಂದರೆ ಆಗ ತೋಟವನ್ನು ಗದ್ದೆಯನ್ನಾಗಿ ಪರಿವರ್ತನೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ನರೇಶ್. ಸಂಪರ್ಕಕ್ಕೆ: 94489 20180

File Courtesy: 
http://prajavani.net/include/story.php?news=11284&section=158&menuid=13
Related Terms: Farmers InnovationFIS
22
Nov

Farmers opt for paddy variety that needs less water

 
One of the farmers who is cultivating the KRH-4 paddy variety in Matada Doddi village near Malavalli in Mandya district.

Farmers in at least six districts, who were affected by deficient rainfall this year, have come forward to cultivate a hybrid variety of paddy, KRH-4, developed by the University of Agricultural Sciences (UAS), Bangalore, which requires less water compared to other varieties.

The paddy variety, developed after several years of research and field trials, is expected to yield 7.8 tonnes a hectare, which is more than double the yield from traditional varieties, according to UAS-B authorities.

Hundreds of farmers have expressed their willingness to cultivate KRH-4 paddy in over 5,000 acres of land in Mandya, Mysore, Hassan, Tumkur, Shimoga and Ramanagaram districts, N. Shivakumar, a breeder at the Paddy Division at the V.C. Farm here, told The Hindu on Sunday.

Promoting the variety

To promote the KRH-4 paddy, the UAS-B is cultivating the variety in 125 acres of land in various districts using the innovative and water saving method of System of Rice Intensification. Standing crop in most of the fields is in the ‘milky’ stage, which will be followed by grain-filling and maturity stages.

Scientists at the Zonal Agricultural Research Station, V.C. Farm, are expecting that yield from the KRH-4 variety to be at least two times more than that from the other varieties.

Crop demonstrations

UAS-B and V.C. Farm authorities have conducted live crop demonstrations in several villages in the six districts which were attended by hundreds of farmers cultivating traditional paddy varieties.

Mr. Shivakumar said more than 20 districts in the State had been badly affected owing to deficient rainfall. KRH-4 was a boon for farmers as it requires less water and fertilizer.

Cultivation of the variety in the 125 acres had been taken up in association with V.C. Farm, Krishi Vigyan Kendras (KVKs) and Karnataka State Seeds Corporation, he said.

“Hundreds of farmers have placed orders for the KRH-4 variety to take up sowing in about 5,000 acres in the next season. The variety may be cultivated in over 15,000 acres in the next two seasons,” he said. The variety has also evoked curiosity among researchers in different parts of the country.

The paddy variety is being cultivated in 15 acres of land at Matada Doddi village near Malavalli.

Puttaswamy, who has been growing traditional paddy varieties since the last 19 years, is cultivating the KRH-4 variety in nearly 4 acres. He said the new variety had drastically reduced the input costs as it requires less water. The yield was expected to be three times more than that from the traditional varieties, he said.

“Farmers in Hadya, Katte Doddi, Channanke Gowdana Doddi, Kyathanahalli, Naguvanahalli and others villages have decided to take up cultivation of the KRH-4 variety in a big way. In Matada Doddi itself at least 100 farmers are ready to sow the hybrid variety,” Mr. Puttaswamy said.

Farmers in the surroundings of Malavalli and Mandya cultivate paddy varieties such as MTU 1001, BPT 5204, IR 64, Thanu and IR 3864. With uncertainty over the release of Cauvery water and owing to deficient rainfall many of them were willing to opt for the new hybrid variety, scientists at the V.C. Farm said.

courtesy:www.thehindu.com

File Courtesy: 
http://www.thehindu.com/news/states/karnataka/farmers-opt-for-paddy-variety-that-needs-less-water/article4108970.ece
6
Sep

மேம்படுத்தப்பட்ட சம்பா மசூரி (Improved Samba Mahsuri)

ஆந்திராவில் உள்ள, நெல் ஆராய்ச்சி இயக்குனரகம்(Directorate of Rice Research, Rajendranagar, Hyderabad)உருவாக்கியுள்ள ரக நெல் பாக்டீரியா நோய் (Bacterial leaf blight) தாக்குதலை சமாளிக்கும் வகையில் உருவாக்கப்பட்டுள்ளது. இந்த நெல் ரகம் "மேம்படுத்தப்பட்ட சம்பா மசூரி' (Improved Samba Mahsuri) என அழைக்கப்படுகிறது. இந்த ரகமானது உயிரி தொழில்நுட்பக் கருவிகளில் ஒன்றான, மார்க்கெர் அசிஸ்டட் செலக்ஷன்(Marker Assisted Selection) மெத்தடாலஜியை பயன்படுத்தி உருவாக்கப்பட்டுள்ளது. ஐதராபாத்தில் உள்ள மாநில வேளாண் பல்கலைக் கழகத்தின் பிரசித்தி பெற்ற ரகமான சம்பா மசூரி (பீபிடி5204) ரகம் கூட, பாக்டீரியா நோய் தாக்குதல்களுக்கு ஆளாகக் கூடியது. ஆனால், மேம்படுத்தப்பட்ட சம்பா மசூரியில், அப்பிரச்னை இல்லை.

Contributed by arunswarnaraj on Sat, 2012-09-01 09:55

Read about Improved Samba Mahsuri
ఇంప్రూవ్డ్ సాంబమసూరి

Check for seed availability 

10
Aug

Aerobic Rice Variety- MAS 946-1 (in Kannada)

Aerobic Rice Variety- MAS 946-1 (Sharada)




File Courtesy: 
Department of Genetics and Plant Breeding UNIVERSITY OF AGRICULTURAL SCIENCES G.K.V.K., Bangalore - 560 065
21
May

అక్షయధాన్

 

File Courtesy: 
వారి పరిశోధనా సంచాలనాలయము, రాజేంద్రనగర్, హైదరాబాద్
21
May

సంపద

 

File Courtesy: 
వారి పరిశోధనా సంచాలనాలయము, రాజేంద్రనగర్, హైదరాబాద్
16
May

అగ్గి తెగులు నివారణ చర్యలు

 

File Courtesy: 
Rice Section, Acharya N G Ranga Agricultural University, Rajendranagar
16
May

అగ్గి తెగులు ఉదృతిని పెంచే కారణాలు, తెగులు వ్యాప్తి

 

File Courtesy: 
Rice Section, Acharya N G Ranga Agricultural University, Rajendranagar
16
May

అగ్గి తెగులు లక్షణాలు




File Courtesy: 
Rice Section, Acharya N G Ranga Agricultural University, Rajendranagar
11
May

వరి అధిక దిగుబడికి మేలైన యజమాన్య పద్దతులు

 




File Courtesy: 
Directorate of Rice Research
4
May

ఆకు ఎండు తెగులు

File Courtesy: 
Directorate of Rice Research, Hyderabad
4
May

అగ్గి తెగులు

File Courtesy: 
Directorate of Rice Research, Hyderabad
Syndicate content
Copy rights | Disclaimer | RKMP Policies